ಮಂಗಳೂರಿನಲ್ಲಿ ಅಪಾರ್ಟ್ ಮೆಂಟ್ ವಂಚಕನ ಸೆರೆ

ಇಲ್ಲಿಗೆ ಸಮೀಪದ ಬಜಪೆ ನಿವಾಸಿ ಮಹಮ್ಮದ್ ಅನ್ಸಾರ್ ಎನ್ನುವವನೇ ಈಗ ಪೊಲೀಸರ ಬಲೆಗೆ ಬಿದ್ದಿರುವ ವಂಚಕ. ಈತ ಮೊಬೈಲ್ ಮೂಲಕ ಎರಡು ಖರೀದಿಸಿದರೆ ಮತ್ತೊಂದು ಉಚಿತ ಎನ್ನುವ ಎಸ್ಎಂಎಸ್ ಸಂದೇಶ ಕಳುಹಿಸುತ್ತಿದ್ದ. ಈತನ ಸಂದೇಶ ಓದಿದವರು ಫ್ಲ್ಯಾಟ್ ವೀಕ್ಷಣೆಗೆ ಹೋಗುತ್ತಿದ್ದರು. ನಿರ್ಮಾಣ ಹಂತದಲ್ಲಿರುವ ಯಾರದ್ದೋ ಪ್ಲ್ಯಾಟ್ ತೋರಿಸಿ ಯಾಮಾರಿಸುತ್ತಿದ್ದ.
ಈತನ ಪ್ರಚಾರದ ಸುಳಿವು ಪಡೆದ ಬಿಲ್ಡರ್ ಸಂಸ್ಥೆಯೊಂದರ ಅಧಿಕಾರಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆಗಿಳಿದು ವಂಚಕನನ್ನು ಬಂಧಿಸಿದ್ದಾರೆ. ಒಂದು ಉಚಿತ ಫ್ಲ್ಯಾಟ್ ಸಿಗುತ್ತದಲ್ಲ ಎಂದು ಕನಸಿನ ಸೌಧ ಕಟ್ಟಿಕೊಳ್ಳುತ್ತಿದ್ದ ನಾಗರಿಕರು ದಿಗ್ಭ್ರಾಂತರಾಗಿದ್ದಾರೆ. ಹಾಗೆಯೆ, ದುಡ್ಡೆಲ್ಲ ವಂಚಕನ ಕೈಪಾಲಾಗಲಿಲ್ಲ ಎಂದು ನಿರಾಳರೂ ಆಗಿದ್ದಾರೆ.












Click it and Unblock the Notifications