ನಿರಾಣಿಗೆ ದೀಪಾವಳಿ ಠುಸ್ಸ್: ತನಿಖೆಗೆ ಕೋರ್ಟ್ ಆದೇಶ

ಇದರಿಂದ ನಿರಾಣಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಅವರ ಮೇಲೆ ರಾಜೀನಾಮೆಗೆ ಒತ್ತಡ ಹೇರಲಾಗಿದೆ. ಅನೇಕಲ್ ಬಳಿ ಜಮೀನೊಂದರ ಡಿನೋಟಿಫಿಕೇಶನ್ ಪ್ರಕರಣದ ಸಂಬಂಧ ಸರಿಯಾಗಿ ದೂರು ಸಲ್ಲಿಸಿಲ್ಲವೆಂದು ನ್ಯಾಯಾಧೀಶ ಎನ್ ಕೆ ಸುಧೀಂದ್ರರಾವ್ ಅವರು ದೂರುದಾರ ಅಲಂ ಪಾಷಾ ವಿರುದ್ಧ ಇಂದೂ ಸಹ ಕಿಡಿಕಾರಿದರಾದರೂ ಪಾಷಾ ಅವರದೇ ಅಂತಿಮ ನಗೆಯಾಯಿತು.
ಪಾಷಾ ದೂರಿನಲ್ಲಿ ಮೇಲ್ನೋಟಕ್ಕೆ ಹುರುಳಿದೆ ಎಂಬುದನ್ನು ಮನಗಂಡ ನ್ಯಾ. ಸುಧೀಂದ್ರ ಅವರು ನಿರಾಣಿ ವಿರುದ್ಧ ಸಿಆರ್ ಪಿಸಿ 156/3 ಅನುಸಾರ ದೂರು ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಳ್ಳುವಂತೆ ಆದೇಶಿಸಿದರು.












Click it and Unblock the Notifications