ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡ್ಡಿ ಮೇಲೆ ಯಾಕೋ ಕುಮಾರಣ್ಣನಿಗೆ ಸಿಂಪತಿ

By Mahesh
|
Google Oneindia Kannada News

ಬೆಂಗಳೂರು, ಅ.16: ಒಂದು ಕಾಲದ ಗೆಳೆಯ ಯಡಿಯೂರಪ್ಪ ಅವರಿಗೆ ಬಂದಿರುವ ದುಃಸ್ಥಿತಿ ಕಂಡು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಮರುಗಿದ್ದಾರೆ.

ಕುಮಾರಣ್ಣನ ವರ್ತನೆ ಜೆಡಿಎಸ್ ಕಾರ್ಯಕರ್ತರು ಕನ್ ಫ್ಯೂಸ್ ಆಗಿದ್ದಾರೆ. ಸಮಾನದುಃಖಿಗಳ ರೀತಿ ಆಡುತ್ತಿರುವ ಕುಮಾರಣ್ಣನ ಮಾತು ಕೇಳಿ ತಲೆ ಕೆರದುಕೊಂಡಿದ್ದಾರೆ.

ಡಿನೋಟೀಫಿಕೇಷನ್ ವಿಚಾರದಲ್ಲಿ ಯಡಿಯೂರಪ್ಪ ಅವರು ಈ ರೀತಿ ದುಡುಕಬಾರದಿತ್ತು. ತಪ್ಪು ಸರಿಪಡಿಸಿಕೊಳ್ಳುವ ಅವಕಾಶವಿತ್ತು. ಆದರೆ, ಯಡಿಯೂರಪ್ಪ ಅವರ ಹುಂಬತನ, ಸಿಡುಕು, ದುಡುಕು ಅವರನ್ನು ಇವತ್ತು ಈ ಸ್ಥಿತಿ ಕರೆ ತಂದಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಮುಖ್ಯಮಂತ್ರಿ ಸ್ಥಾನದಲ್ಲಿದ್ದ ಒಬ್ಬ ವ್ಯಕ್ತಿಗೆ ಈ ರೀತಿ ಪರಿಸ್ಥಿತಿ ಬಂದಿರುವುದು ದುರದೃಷ್ಟ. ಯಡಿಯೂರಪ್ಪ ಅವರ ಬಂಧನದಿಂದ ಜೆಡಿಎಸ್ ಗೆ ಸಂತೋಷವಾಗಿಲ್ಲ. ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮವನ್ನು ವಿರೋಧಿಸುತ್ತೇನೆ ಎಂದಿದ್ದಾರೆ.

ತಪ್ಪು ಮಾಡಿದವರು ನ್ಯಾಯಾಂಗ ವ್ಯವಸ್ಥೆಗೆ ತಲೆಬಾಗಲೇಬೇಕು ಎಂದು ಕೆಪಿಸಿಸಿ ಆಧ್ಯಕ್ಷ ಜಿ ಪರಮೇಶ್ವರ್ ಅವರು ಹೇಳಿರುವುದು ನಿಜ ಆದರೆ, ಕಾಂಗ್ರೆಸ್ ನಾಯಕರು ಮೊದಲು ತಮ್ಮ ತಪ್ಪುಗಳನ್ನು ಸರಿಪಡಿಸಿಕೊಂಡು ನಂತರ ಸಂಭ್ರಮಿಸಲಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

English summary
JDS leader H D Kumaraswamy, who released documents relating to alleged irregularities in denotification of lands by former Chief Minister BS Yeddyurappa, on Oct 15 said had the BJP leader taken certain corrective steps, he would not have landed in jail.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X