ಅಡ್ವಾಣಿ ಯಾತ್ರೆ ಕರ್ನಾಟಕದಿಂದ ಆರಂಭವಾಗಲಿ: ಕಾಂಗ್ರೆಸ್

Advani yatra should start from Karnataka
ನವದೆಹಲಿ, ಅ 06: ಬಿಜೆಪಿ ನಾಯಕ ಎಲ್ ಕೆ ಅಡ್ವಾಣಿ ಅವರ ಜನ ಚೇತನ ಯಾತ್ರೆ ಆರಂಭಿಸಲು ಬಿಹಾರಕ್ಕಿಂತ ಕರ್ನಾಟಕ ಸೂಕ್ತ ಎಂದು ಕಾಂಗ್ರೆಸ್ ಕುಟುಕಿದೆ. ಕರ್ನಾಟಕದಲ್ಲಿ ಬಿಜೆಪಿ ಪಕ್ಷದ ಆಡಳಿತವಿದ್ದು ಭ್ರಷ್ಟಾಚಾರದ ವಿರುದ್ಧ ಉತ್ತಮ ಆರಂಭವನ್ನು ಪಡೆಯಬಹುದು ಎಂದು ಕಾಂಗ್ರೆಸ್ ವಕ್ತಾರ ರಶೀದ್ ಆಲ್ವಿ ಹೇಳಿದ್ದಾರೆ.

"ಬಿಜೆಪಿ ನಾಯಕರುಗಳಾದ ದಿಲಿಪ್ ಸಿಂಗ್ ಜುಬೆವೊ, ಬಂಗಾರು ಲಕ್ಷ್ಮಣ್, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ರೆಡ್ಡಿ ಸಹೋದರರು ಈ ರಥಯಾತ್ರೆಯ ಮುಂಚೂಣಿಯಲ್ಲಿರಬೇಕು. ಇವರೆಲ್ಲ ಭ್ರಷ್ಟಾಚಾರದ ಮುಂದಾಳುಗಳು" ರಶೀದ್ ಆಲ್ವಿ ವರದಿಗಾರರ ಮುಂದೆ ಕರ್ನಾಟಕ ಬಿಜೆಪಿಯನ್ನು ವಿಡಂಬಿಸಿದ್ದಾರೆ.

38 ದಿನಗಳ ಯಾತ್ರೆಯ ಕುರಿತು ಬಿಜೆಪಿ ಮಾಹಿತಿ ಬಿಡುಗಡೆ ಮಾಡಿದ ಸಂದರ್ಭದಲ್ಲಿ ಕಾಂಗ್ರೆಸ್ ಹೀಗೆ ಟೀಕೆ ಆರಂಭಿಸಿದೆ. ಅಡ್ವಾಣಿ ಅವರ ಜನ ಚೇತನ ಯಾತ್ರೆ ಅಕ್ಟೋಬರ್ 11ರಿಂದ ಆರಂಭವಾಗಲಿದೆ.

ಅ.11ರಂದು ಸಮಾಜವಾದಿ ನಾಯಕ ಜೈ ಪ್ರಕಾಶ್ ನಾರಾಯಣ್ ಅವರ ಹುಟ್ಟೂರಾದ ಸಿತಾಬ್ ದಿಯಾರಾದಲ್ಲಿ ಬಿಹಾರ್ ಮುಖ್ಯಮಂತ್ರಿ ನಿತಿಶ್ ಕುಮಾರ್ ಅವರು ರಥಯಾತ್ರೆಗೆ ಚಾಲನೆ ನೀಡಲಿದ್ದಾರೆ.

ಒಟ್ಟಾರೆ 23 ರಾಜ್ಯಗಳು, 100 ಜಿಲ್ಲೆಗಳು, ಕೇಂದ್ರಾಡಳಿತ ಪ್ರದೇಶ ಸುತ್ತುವ ಅಡ್ವಾಣಿ ಅವರ ರಥ ಒಟ್ಟು 7600 ರಿಂದ 12,000 ಕಿ.ಮೀ ಕ್ರಮಿಸಲಿದೆ. ಉತ್ತರ ಪ್ರದೇಶ, ಉತ್ತರಾಖಂಡ್, ಪಂಜಾಬ್, ಗೋವಾ, ಕರ್ನಾಟಕ, ಅರುಣಾಚಲ ಪ್ರದೇಶ, ಪಶ್ಚಿಮ ಬಂಗಾಲ ಹಾಗೂ ಅಸ್ಸಾಂ ಪ್ರಮುಖ ನಿಲುಗಡೆ ಸ್ಥಾನಗಳಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+