ಓಎಂಸಿ ಮೇಲೆ ಮತ್ತೆ ಸಿಬಿಐ ದಾಳಿ, ಡಿಸ್ಕ್ ವಶ

ಓಎಂಸಿ ಕಂಪನಿಯ ಎಂಡಿ ಶ್ರೀನಿವಾಸ ರೆಡ್ಡಿ ಹಾಗೂ ಮಾಲೀಕ ಜನಾರ್ದನ ರೆಡ್ಡಿ ಅವರು ಇನ್ನೂ ವಿಚಾರಣಾಧೀನ ಖೈದಿಗಳಾಗಿ ಹೈದರಾಬಾದಿನಲ್ಲಿದ್ದಾರೆ. ಈ ನಡುವೆ ಮತ್ತೊಮ್ಮೆ ಓಎಂಸಿ ಕಚೇರಿ ಮೇಲೆ ದಾಳಿ ನಡೆದಿರುವುದು ಕುತೂಹಲ ಕೆರಳಿಸಿದೆ.
ಓಎಂಸಿ ಕಚೇರಿಯಲ್ಲಿದ್ದ ಸಿಡಿ, 4 ಹಾರ್ಡ್ ಡಿಸ್ಕ್, ಮೂರು ಕಂಪ್ಯೂಟರ್ ಸೇರಿದಂತೆ ಅಮೂಲ್ಯ ಕಡತಗಳನ್ನು ಸಿಬಿಐ ತನ್ನ ವಶಕ್ಕೆ ತೆಗೆದುಕೊಂಡಿದೆ. ಅಕ್ರಮ ಗಣಿಗಾರಿಕೆ ವಿರುದ್ಧ ಈ ಪರಿಕರಗಳು ಸಾಕ್ಷ್ಯವಾಗಿ ಬಳಸಲು ಸಿಬಿಐ ನಿರ್ಧರಿಸಿದೆ ಎನ್ನಲಾಗಿದೆ.
ಡಿ.10, 2009ರಲ್ಲೂ ಕೂಡಾ ಸಿಬಿಐ ತಂಡ ಓಎಂಸಿ ಕಚೇರಿ ಬಾಗಿಲು ಮುರಿದಿತ್ತು. ಈ ಬಾರಿ 11 ಮಂದಿ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕರ್ನಾಟಕದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ವಿರುದ್ಧ ತನಿಖೆ ನಡೆಸಲು ಸಿಬಿಐಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿರುವ ಬೆನ್ನಲ್ಲೇ ಈ ರೀತಿ ದಾಳಿ ನಡೆದಿರುವುದು ಕುತೂಹಲ ಕೆರಳಿಸಿದೆ. ದಾಳಿ ಸಮಯದಲ್ಲಿ ವಶಪಡಿಸಿಕೊಂಡ ವಸ್ತುಗಳ ಬಗ್ಗೆ ಸಿಬಿಐ ತಂಡ ಅಧಿಕೃತವಾಗಿ ಇನ್ನೂ ಹೇಳಿಕೆ ನೀಡಿಲ್ಲ.











Click it and Unblock the Notifications