2ಜಿ: ಗವರ್ನರ್ ಸುಬ್ಬರಾವ್ ವರದಿ ಉರುಳಾಗಲಿದೆಯೇ ಪ್ರಧಾನಿ ಸಿಂಗ್ ಗೆ

ರಾಜಾ, ಕನ್ನಿಮೋಳಿ ಅವರಷ್ಟೇ ಹಗರಣದ ಸೂತ್ರಧಾರರಲ್ಲ. ಅವರಿಗೆ ಸಹಾಯ'ಹಸ್ತ' ಚಾಚಿರುವ ಧೀಮಂತರೂ ಇದ್ದಾರೆ. ಈ ಸಂಬಂಧ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ದುವ್ವೂರಿ ಸುಬ್ಬರಾವ್ ಸಿಬಿಐ ನ್ಯಾಯಾಲಯಕ್ಕೆ ಮಹತ್ವದ ಸಾಕ್ಷ್ಯ ನೀಡಿದ್ದಾರೆ ಎಂದು ಸಿಬಿಐ ಸೋಮವಾರ ಹೇಳಿದೆ.
ಯುಪಿಎ ಸರಕಾರ ಇಡೀ 2ಜಿ ಹಗರಣದಿಂದ ಸರಕಾರಿ ಬೊಕ್ಕಸಕ್ಕೆ ನಯಾ ಪೈಸೆ ನಷ್ಟವಾಗಿಲ್ಲ ಎಂದೇ ಇದುವರೆಗೆ ಹೇಳಿಕೊಂಡು ಬಂದಿದೆ. ಆದರೆ 2008ರ ಆರ್ ಬಿಐ ರಿಪೋರ್ಟ್ ಪ್ರಕಾರ ಬೊಕ್ಕಸಕ್ಕೆ 31,000 ಕೋಟಿ ರುಪಾಯಿ ನಷ್ಟ ಉಂಟಾಗಿರುವುದು ದೃಢಪಟ್ಟಿದೆ.
ಇದು ಕಾನೂನಾತ್ಮಕವಾಗಿ ಇದು ಅತ್ಯಂತ ಮಹತ್ವದ ಸಾಕ್ಷ್ಯವಾಗಲಿದ್ದು, ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಈಗಾಗಲೇ ದಾಖಲಾಗಿರುವ ಆರೋಪಪಟ್ಟಿಯಲ್ಲಿ ಅಡಕವಾಗಿದೆ. ಈ ಸಂಬಂಧ ಸದ್ಯದಲ್ಲೇ ಸುಬ್ಬರಾವ್ ಅವರು ಕೋರ್ಟಿನಲ್ಲಿ ಹಾಜರಾಗಿ, ಸಾಕ್ಷ್ಯ ನುಡಿಯಲಿದ್ದಾರೆ ಎಂದು ಸಿಬಿಐ ತಿಳಿಸಿದೆ.











Click it and Unblock the Notifications