ರೆಡ್ಡಿ ಗಣಿ ಅಕ್ರಮ: ರಾಜ್ಯದಲ್ಲೂ ಸಿಬಿಐ ತನಿಖೆಗೆ ಇಂದು ಸುಪ್ರೀಂ ಆದೇಶ

ಕರ್ನಾಟಕದಲ್ಲಿ ನಾವು ಗಣಿಗಾರಿಕೆಯನ್ನೇ ಮಾಡುತ್ತಿಲ್ಲ ಎನ್ನುತ್ತಿದ್ದ ಗಾಲಿ ಜನಾರ್ದನ ರೆಡ್ಡಿ ಕುಟುಂಬ ಕರ್ನಾಟಕದಲ್ಲೂ ಗಣಿಗಾರಿಕೆ ನಡೆಸಿದೆ. ಈ ಮೂಲಕ ಅಕ್ರಮವಾಗಿ ಸಾವಿರಾರು ಕೋಟಿ ರೂಪಾಯಿ ಲೂಟಿ ಮಾಡಿದೆ. ಆದ್ದರಿಂದ ರೆಡ್ಡಿಗೆ ಸೇರಿದ ಅಸೋಸಿಯೇಟೆಡ್ ಮೈನಿಂಗ್ ಕಾರ್ಪೊರೇಷನ್ ನಡೆಸಿರುವ ಗಣಿಗಾರಿಕೆ ಕುರಿತು ಸಿಬಿಐ ತನಿಖೆಯಾಗಬೇಕು ಎಂದು ಸಮಿತಿ ಸಲಹೆ ನೀಡಿದೆ.
ಸುಪ್ರೀಂಕೋರ್ಟ್ನ ಹಸಿರು ಪೀಠದ ಮುಂದೆ ಶುಕ್ರವಾರ ವರದಿಯ ಕುರಿತು ವಿಚಾರಣೆ ನಡೆಯಲಿದೆ. ಈವರೆಗೆ ಸಿಇಸಿ ಶಿಫಾರಸುಗಳು ಬಹುತೇಕ ಆದೇಶವಾಗಿ ಹೊರಬಿದ್ದಿರುವ ಹಿನ್ನೆಲೆಯಲ್ಲಿ ಈ ಶಿಫಾರಸು ಸಹ ಆದೇಶವಾಗಿ ಹೊರಬೀಳುವ ಸಾಧ್ಯತೆ ಇದೆ. ಅಲ್ಲಿಗೆ ರೆಡ್ಡಿ ವಿರುದ್ಧ ತನಿಖೆ ನಡೆಸಲು ಕರ್ನಾಟಕದಲ್ಲೂ ಸಿಬಿಐ ಖೆಡ್ಡ ಸಿದ್ಧವಾಗಿದೆ.












Click it and Unblock the Notifications