ಕಂಪ್ಯೂಟರ್ ಹಗರಣದಲ್ಲಿ ಯಡ್ಡಿ, ನೆತ್ತಿ ಮೆಲೆ ಸಿಬಿಐ ಕತ್ತಿ?

ತಮ್ಮ ಅಧಿಕಾರಾವಧಿಯಲ್ಲಿ ರಾಜ್ಯದ 4396 ಸರ್ಕಾರಿ ಪ್ರೌಢಶಾಲೆ 412 ಕೋಟಿ ರೂಪಾಯಿ ಮೊತ್ತದ ಕಂಪ್ಯೂಟರ್ ಪೂರೈಕೆ ಗುತ್ತಿಗೆಯಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆಸಿರುವ ಬಗ್ಗೆ ಆರೋಪಗಳು ಕೇಳಿಬಂದಿವೆ.
ಶಿಕ್ಷಣ, ಹಣಕಾಸು ಮತ್ತು ಇ- ಆಡಳಿತ ಇಲಾಖೆಯ ತೀವ್ರ ಆಕ್ಷೇಪ ಇದ್ದರೂ ಯಡ್ಡಿ ಅತಿ ಮುತುವರ್ಜಿಯಿಂದ ತಮಿಳುನಾಡಿನ ಎವೆರಾನ್ ಎಜ್ಯುಕೇಶನ್ ಪ್ರೈವೇಟ್ ಲಿಮಿಟೆಡ್ಡಿಗೆ ಕಂಪ್ಯೂಟರ್ ಸರಬರಾಜು ಗುತ್ತಿಗೆ ನೀಡಿದ್ದರು.
ಎವೆರಾನ್ ಅಸಲಿ ಬಣ್ಣ ಬಯಲು: ಕೋಟ್ಯಂತರ ರೂಪಾಯಿ ಅವ್ಯಹಾರ ಬೆಳಕಿಗೆ ಬರುತ್ತಲೇ ಆಗಸ್ಟ್ 31ರಂದು ಕಂಪೆನಿಯ ಆಡಳಿತ ನಿರ್ದೇಶಕ ಪಿ ಕಿಶೋರನನ್ನು ಆದಾಯ ತೆರಿಗೆ ಹೆಚ್ಚುವರಿ ಆಯುಕ್ತರಿಗೆ 50 ಲಕ್ಷ ರೂಪಾಯಿ ಲಂಚ ನೀಡಲು ಮುಂದಾದ ಸಂದರ್ಭದಲ್ಲಿ ಸಿಬಿಐ ಬಂಧಿಸಿದೆ. ಕಂಪನಿ ಷೇರುಗಳು 30-40 ಕೋಟಿ ರೂ.ಗೆ ಮಾರಾಟವಾಗಿದೆ
ಕಂಪ್ಯೂಟರ್ ಸರಬರಾಜು ಗುತ್ತಿಗೆ ಪಡೆವಲ್ಲಿ ಕಿಶೋರ್ ಕೆಲವು ಪ್ರಭಾವಿ ವ್ಯಕ್ತಿಗಳಿಗೆ ಲಂಚ ನೀಡಿದ್ದ ಎಂಬ ಆರೋಪವೂ ಇದೆ. ಈ ಹಿನ್ನೆಲೆಯಲ್ಲಿ ಸಿಬಿಐ ತುರ್ತು ತನಿಖೆ ನಡೆಸುತ್ತಿದೆ.
ಡಿಎಸ್ಇಆರ್ಟಿ 2008ರಲ್ಲಿ ಕಂಪ್ಯೂಟರ್ ಪೂರೈಕೆ ಯೋಜನೆ ರೂಪಿಸಿತ್ತು. 412 ಕೋಟಿ ರೂಪಾಯಿ ಮೊತ್ತದ ಯೋಜನೆಯನ್ನು ಇ-ಟೆಂಡರ್ ಕರೆದು ಅರ್ಹ ಗುತ್ತಿಗೆದಾರರಿಗೆ ನೀಡಲು ಶಿಕ್ಷಣ ಇಲಾಖೆ ಮತ್ತು ಡಿಎಸಿಆರ್ಟಿ ನಿರ್ಧರಿಸಿದ್ದರೂ ಇದಕ್ಕೆ ಯಡಿಯೂರಪ್ಪ ಬ್ರೇಕ್ ಹಾಕಿದ್ದರ.
ಶಿಕ್ಷಣ ಇಲಾಖೆಯೇ ಈ ಯೋಜನೆ ನಿರ್ವಹಿಸಿದರೆ ಎವೆರಾನ್ ಕಂಪೆನಿಯು ಕಿಯೋನಿಕ್ಸ್ಗೆ ಕೊಡಬೇಕಾಗಿರುವ ಶೇ 3ರಷ್ಟು ಕಮಿಶನ್ ಉಳಿಯುತ್ತಿತ್ತು. ಆದರೆ, ಕೆಲವು ಪ್ರಭಾವಿಗಳು ಯಡ್ಡಿ ಮೇಲೆ ಒತ್ತಡ ಹೇರಿ ಯೋಜನೆಯನ್ನು ಎವೆರಾನ್ - ಕಿಯೋನಿಕ್ಸ್ಗೆ ವಹಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
ಕಂಪ್ಯೂಟರ್ ಪೂರೈಕೆ ಹಗರಣ ಬೆಳಕಿಗೆ ಬರುತ್ತಲೇ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಈ ಗುತ್ತಿಗೆ ರದ್ದುಪಡಿಸುವಂತೆ ಮುಖ್ಯ ಕಾರ್ಯದರ್ಶಿಯವರಲ್ಲಿ ಮಾತುಕತೆ ನಡೆಸಿದ್ದಾರೆ.












Click it and Unblock the Notifications