ಶಿಕ್ಷಕಿಯ ಕೆನ್ನೆಗೆ ಬಾರಿಸಿ, ನಾಪತ್ತೆಯಾದ ವಿದ್ಯಾರ್ಥಿ

ಆರ್ ಕೆ ಪುರಂನಲ್ಲಿರುವ ಜೋಸ್ ಮಾರುತಿ ಸರ್ವೋದಯ ವಿದ್ಯಾಲಯದ ಆವರಣದಲ್ಲಿ ನಿನ್ನೆ (ಸೆ.5) ಮಧ್ಯಾಹ್ನ ಈ ಘಟನೆ ನಡೆದಿದೆ. ಐಪಿಸಿ ಸೆಕ್ಷನ್ 323, 506 ಮತ್ತು 509 ಪ್ರಕರಣಗಳಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಮಧ್ಯೆ, ತಮ್ಮ ಹುಡುಗ ವಿಷ್ಣು ಇನ್ನೂ ಮನೆಗೆ ಬಂದಿಲ್ಲ ಎಂದು ಪೋಷಕರು ಆತಂಕಕ್ಕೆ ಸಿಲುಕಿದ್ದಾರೆ.
ಏನಾತಯಿತೆಂದರೆ, ಕಾರನ್ನು ರಿವರ್ಸ್ ತೆಗೆದುಕೊಳ್ಳುವಾಗ ವಿಷ್ಣು ಮತ್ತು ಅವನ ಸಂಗಡಿಗರು ಅಡ್ಡವಿದ್ದರು. ಪಕ್ಕಕ್ಕೆ ಸರಿಯುವಂತೆ ನಿಶಾ ಸೂಚಿಸಿದ್ದಾರೆ. ಆಗ ವಿಷ್ಣು, ನಿಶಾ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾನೆ. ಕಾರಿನಿಂದ ಇಳಿದ ನಿಶಾ, ವಿಷ್ಣುನನ್ನು ವಿಚಾರಿಸಿಕೊಂಡಿದ್ದಾರೆ. ಇದರಿಂದ ಸಿಟ್ಟಿಗೆದ್ದ ವಿಷ್ಣು, ನಿಶಾ ಕೆನ್ನೆಗೆ ಮೂರು ಬಾರಿ ಬಾರಿಸಿ, ಪೊಲೀಸರಿಗೆ ಹೇಳ ಬೇಡ ಎಂದು ಜೀವ ಬೆದರಿಕೆಯೊಡ್ಡಿ, ಕಾಲ್ಕಿತ್ತಿದ್ದಾನೆ.












Click it and Unblock the Notifications