ಅಷ್ಟಮಂಗಲದ ರೂವಾರಿ ಶೋಭಾ ಕರಂದ್ಲಾಜೆ

ಚಾಮರಾಜನಗರಕ್ಕೆ ಶಾಪ ಅಂಟಿದೆ. ಚಾಮರಾಜೇಶ್ವರ ದೇವಸ್ಥಾನದಲ್ಲಿ ಹೋಮ-ಹವನಾದಿಗಳನ್ನು ನಡೆಸಬೇಕು. ದೇವಸ್ಥಾನದ ಮುಂದಿರುವ ಕಲ್ಯಾಣಿಯನ್ನು ಉತ್ಖನನ ಮಾಡಿಸಬೇಕು. ಹಾಗಾದರೆ ಮಾತ್ರ ಚಾಮರಾಜನಗರದ ಅಭಿವೃದ್ಧಿ ಸಾಧ್ಯ ಎಂಬ ಸಲಹೆ-ಸೂಚನೆಗಳನ್ನು ಕೇರಳದ ಜ್ಯೋತಿಷಿಗಳು ನೀಡಿದರು. ಅಂತೆಯೇ ಚಾ.ನಗಕ್ಕೆ ಅಂಟಿರುವ ಶಾಪ ವಿಮೋಚನೆಗಾಗಿ ಶೋಭಾ ಕರಂದ್ಲಾಜೆ ಕೈಗೊಂಡಿರುವ 3 ದಿನಗಳ ಅಷ್ಟಮಂಗಲ ಮಹಾಹೋಮ, ಹವನ ಕಾರ್ಯಕ್ಕೆ ಕೇರಳದ ಕಾಸರಗೋಡಿನ 35 ಜನರ ವಿಶೇಷ ಜ್ಯೋತಿಷಿಗಳ ತಂಡ ಚಾಮರಾಜನಗರಕ್ಕೆ ಆಗಮಿಸಿ ಭಾನುವಾರ (ಸೆ.4) ಸಂಜೆ ಮಹಾಹೋಮ ಆರಂಭಿಸಿದ್ದಾರೆ.
ಅಷ್ಟಮಂಗಲದಲ್ಲಿ ಕಂಡು ಬಂದ ಪ್ರಶ್ನೆಗಳಿಗೆ ಪರಿಹಾರವಾಗಿ ಹೋಮ ಆರಂಭಗೊಂಡಿದೆ. ಹೋಮದಲ್ಲಿ ಸಾವಿರಾರು ಕೆಜಿಯಷ್ಟು ತುಪ್ಪವನ್ನು ಯಜ್ಞ ಕುಂಡದಲ್ಲಿ ಅಗ್ನಿಗೆ ಆಹುತಿ ನೀಡಿ ಅದರ ಹವಿಸ್ಸು ದೇವ ದೇವತೆಗಳಿಗೆ ಅರ್ಪಿತವಾದರೆ ಚಾಮರಾಜನಗರಕ್ಕೆ ಅಂಟಿರುವ ಶಾಪ ವಿಮೋಚನೆ ಆಗಲಿದೆ ಎಂಬುದು ಮಹಾಹೋಮದ ನಂಬಿಕೆ.
ಚಾಮರಾಜನಗರದ ಶಾಪ ವಿಮೋಚನೆಗಾಗಿ ಕೇರಳದ ಜೋತಿಷಿಗಳ ತಂಡ ಕೈಗೊಂಡಿರುವ ಹೋಮ ಇದೀಗ ಚಾಮರಾಜನಗರದಲ್ಲಿ ಪರ ವಿರೋಧ ಪ್ರತಿಭಟನೆಗೂ ಕಾರಣವಾಗಿದೆ. ಹೋಮ ನಡೆಸುವುದನ್ನು ವಿರೋಧಿಸಿರುವ ಪ್ರಗತಿಪರ ಸಂಘಟನೆಗಳ ಕೆಲ ಮುಖಂಡರು ಭಾನುವಾರ ಕಪ್ಪು ಪಟ್ಟಿ ಧರಿಸಿ ಚಾಮರಾಜೇಶ್ವರ ಉದ್ಯಾನದಿಂದ ಭುವನೇಶ್ವರಿ ವೃತ್ತಕ್ಕೆ ಮೆರವಣಿಗೆಯಲ್ಲಿ ತೆರಳಿ ಹೋಮ ನಡೆಯುವುದನ್ನು ವಿರೋಧಿಸಿದರು. ಸರ್ಕಾರವೇ ಮೂಢನಂಬಿಕೆಯನ್ನು ಪೋಷಿಸುತ್ತಿದೆ ಎಂದು ಆಪಾದಿಸಿದರು. ಜಿಲ್ಲಾ ಸಚಿವ ರೇಣುಕಾಚಾರ್ಯ ಮತ್ತು ಶೋಭಾ ಕರಂದ್ಲಾಜೆ ಅವರ ಭೂತದಹನ ಮಾಡಿದರು. ದೇವಸ್ಥಾನದ ಅಭಿವೃದ್ಧಿಗೆ ಹಣ ನೀಡುವ ಬದಲು ಹೋಮ ನಡೆಸುವ ಮೂಲಕ ನಗರದ ಜನರನ್ನು ಅವಮಾನ ಮಾಡಲಾಗುತ್ತಿದೆ ಎಂದು ಘೋಷಣೆ ಕೂಗಿದರು.
ಮತ್ತೊಂದು ಕಡೆ ಚಾಮರಾಜೇಶ್ವರಸ್ವಾಮಿಯ ನೂರಾರು ಭಕ್ತಾದಿಗಳ ಗುಂಪು ಹಿಂದುಳಿದ ಚಾಮರಾಜನಗರದ ಸರ್ವಾಂಗೀಣ ಅಭಿವೃದ್ಧಿಗಾಗಿ ಕೈಗೊಂಡಿರುವ ಹೋಮವನ್ನು ಸ್ವಾಗತಿಸಿದರು. ಹೋಮವನ್ನು ವಿರೋಧಿಸುವ ಮೂಲಕ ಭಕ್ತಾದಿಗಳ ಧಾರ್ಮಿಕ ಭಾವನೆಗಳನ್ನು ಕೆಣಕುತ್ತಿರುವ ಧರ್ಮವಿರೋಧಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೇವಸ್ಥಾನದ ಮುಂದೆ ಧರಣಿ ಕುಳಿತರು. ಬಳಿಕ ಯಾವುದೇ ಅಡ್ಡಿ ಇಲ್ಲದಂತೆ ಹೋಮ ನಡೆಯಲು ಬಂದೋಬಸ್ತು ಮಾಡುವುದಾಗಿ ಪೊಲೀಸರು ನೀಡಿದ ಭರವಸೆ ಮೇರೆಗೆ ಪ್ರತಿಭಟನೆಯಿಂದ ಹಿಂದೆ ಸರಿದರು.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications