ಲೋಕಪಾಲ : ಕುಂದಾಪುರದ ವಿದ್ಯಾರ್ಥಿಗಳ ಸಹಿ ಅಭಿಯಾನ

ಅಣ್ಣಾ ಹೋರಾಟವನ್ನು ಬೆಂಬಲಿಸಿ ಕರ್ನಾಟಕದ ಹಳ್ಳಿಹಳ್ಳಿಗಳಲ್ಲಿಯೂ ಸತ್ಯಾಗ್ರಹ, ಅಭಿಯಾನ, ಪ್ರತಿಭಟನೆಗಳು ನಡೆಯುತ್ತಿವೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ತಗ್ಗರ್ಸೆಯ ಸ್ನೇಹ ತರಂಗ ಬೈಂದೂರು ವಿದ್ಯಾರ್ಥಿಗಳ ಸಂಘಟನೆ ಜನ ಲೋಕಪಾಲ ಮಸೂದೆಯನ್ನು ಮಂಡಿಸಬೇಕೆಂದು ಆಗ್ರಹಿಸಿ ಸಹಿ ಸಂಗ್ರಹಕ್ಕೆ ತೊಡಗಿದೆ.
ಕುಂದಾಪುರ ತಾಲೂಕಿನ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಸಹಿ ಅಭಿಯಾನದಲ್ಲಿ ಭಾಗಿಯಾಗಿ 2500 ಸಹಿಗಳನ್ನು ಸಂಗ್ರಹಿಸಿ ಕುಂದಾಪುರ ಪೊಲೀಸ್ ಕಮಿಷನರ್ ಅವರಿಗೆ ಮನವಿಯನ್ನು ಸಲ್ಲಿಸಿದ್ದಾರೆ. ಅವರ ಮುಖಾಂತರ ಕೇಂದ್ರ ಸರಕಾರದ ಮೇಲೆ ಜನ ಲೋಕಪಾಲ ಮಸೂದೆ ಮಂಡನೆಗೆ ಒತ್ತಡ ಹೇರಿದ್ದಾರೆ.
ಸಂಘಟನೆಯ ಅಧ್ಯಕ್ಷ ಸುನೀಲ್ ಎಚ್ ಜಿ, ಪ್ರವೀಣ್ ಟಿ, ಪ್ರವೀಣ್ ಶೆಟ್ಟಿ, ದಯಾನಂದ, ನಕ್ಷತ್ರ, ಚೇತನಕುಮಾರ್, ಜಯರಾಜ ಕಾಂಚನ್, ಪ್ರಭಾಕರ್, ರಾಘವೇಂದ್ರ, ನಾಗರಾಜ, ವಿನಯ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.












Click it and Unblock the Notifications