ಅಣ್ಣಾ ಪ್ರಾಣ ಜತೆ ಚೆಲ್ಲಾಟ 'ಬೇಡಿ ಅಕ್ಕಾ' - ಬಾಳ್ ಠಾಕ್ರೆ

ಕಿರಣ್ ಬೇಡಿ ಮತ್ತು ಇತರರಿಗೆ ಸರಕಾರದೊಂದಿಗೆ ವೈಯಕ್ತಿಕ ದ್ವೇಷವಿದೆ. ಇದಕ್ಕಾಗಿ ಈ ಜನರು ಹಜಾರೆಯ ಜೀವದ ಜತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಪಕ್ಷದ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಠಾಕ್ರೆ ಕಿಡಿಕಾರಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಕಿರಣ್ ಬೇಡಿ ಬಹುಕಾಲವಿದ್ದರೂ ಆಕೆಯನ್ನು ಯಾವುದೇ ಸರ್ಕಾರ ದಿಲ್ಲಿ ಪೊಲೀಸ್ ಆಯುಕ್ತರನ್ನಾಗಿ ಮಾಡಿಲ್ಲ ಎಂದು ಸಂಪಾದಕೀಯದಲ್ಲಿ ತಿಳಿಸಲಾಗಿದೆ.
ಅರವಿಂದ ಕೇಜ್ರಿವಾಲ, ಕಿರಣ್ ಬೇಡಿ, ಮಾನಿಷ್ ಸಿಸೋಡಿಯಾ ಅವರು ಮುಂದಿನ 10-12 ದಿನ ಉಪವಾಸವಿರಲಿ. ಅವರ ದೇಹಗಳೂ ಉಪವಾಸದ ಬೇಗೆಯಲ್ಲಿ ಬೇಯಲಿ. ಈ ಜನರು ದಿನದಲ್ಲಿ ಎರಡು ಹೊತ್ತು ಊಟ ಮಾಡುತ್ತಾರೆ ಮತ್ತು ನಾಲ್ಕು ಹೊತ್ತು ತಿಂಡಿ ತಿನ್ನುತ್ತಾರೆ. ಆದರೂ ಭ್ರಷ್ಟಾಚಾರ ವಿರೋಧಿ ಚಳವಳಿಯನ್ನು ಮುಂದುವರಿಸುತ್ತಿದ್ದಾರೆ. ಇದು ಹಜಾರೆಗೆ ಮಾಡಿದ ನಂಬಿಕೆ ದ್ರೋಹವಾಗಿದೆ ಎಂದೂ ಶಿವಸೇನಾ ಮುಖ್ಯಸ್ಥ ಹೇಳಿದ್ದಾರೆ.












Click it and Unblock the Notifications