ಸದಾನಂದರೇ ನಿಮ್ಮನ್ನು ನೋಡಿ ಜನ ನಗುವಂತಾಗುವುದು ಬೇಡ!

ಇಂತಹ ಅಧಿಕಾರಿಯನ್ನು ಮುಂದುವರಿಯಲು ಎತ್ತಂಗಡಿ ಮಾಡಿರುವ ಹಿಂದೆ ಹಲವರ ಕೈವಾಡ ಇರಲೇ ಬೇಕು. ಭ್ರಷ್ಟಾಚಾರದ ವಿರುದ್ಧ ಮತ್ತು ಬಲಿಷ್ಠ ಲೋಕಪಾಲ ವ್ಯವಸ್ಥೆ ಜಾರಿಗೆ ಬರಬೇಕೆಂದು ದೇಶವ್ಯಾಪಿ ಹೋರಾಟ ನಡೆಯುತ್ತಿರುವಾಗ ಮತ್ತು ಇದಕ್ಕೆ ಬಿಜೆಪಿ ಬೆಂಬಲಿಸಿರುವಾಗ ಆ ಪಕ್ಷದ ಸರ್ಕಾರದ ಈ ಕ್ರಮ ನಾಚಿಕೆಗೇಡಿನದು.
ಮುಖ್ಯಮಂತ್ರಿ ಸದಾನಂದ ಗೌಡರು ಇಂತಹ ಕ್ರಮಕೈಗೊಳ್ಳುವ ಮೂಲಕ ಯಡಿಯೂರಪ್ಪನವರ ಕೈಗೊಂಬೆಯಾಗಿ ತಮ್ಮ ಹೆಸರಿಗೆ ಕಳಂಕ ತಂದುಕೊಳ್ಳಲಿದ್ದಾರೆ. ಹೀಗೇ ಮುಂದುವರಿದರೆ ಸದಾ ನಗುತ್ತಿರುವ ಸದಾನಂದಗೌಡರನ್ನು ನೋಡಿ ರಾಜ್ಯದ ಜನರೇ ನಗುವಂತಾಗುತ್ತದೆ.












Click it and Unblock the Notifications