ಉಡುಪಿಯಲ್ಲಿ ಚಿನ್ನಾಭರಣ ಮಳಿಗೆ ಮೇಲೆ ಗುಂಡಿನ ದಾಳಿ

ಐರೋಡಿ ಜುವೆಲ್ಲರ್ಸ್ ಅಂಗಡಿ ಮೇಲೆ ಗುಂಡಿ ದಾಳಿ ಮಾಡಲಾಗಿದೆ. ಮಳಿಗೆಯಲ್ಲಿದ್ದ ನಾಲ್ಕು ಮಂದಿ ಕೆಲಸದವರು ಅಪಾಯದಿಂದ ಪಾರಾಗಿದ್ದಾರೆ. ಅಪರಿಚಿತರು ನಾಲ್ಕು ಸುತ್ತು ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಭೂಗತ ಜಗತ್ತಿನವರ ಕೈವಾಡ ಇರಬಹುದೆಂಬ ಅನುಮಾನಗಳಿವೆ. ಹಫ್ತಾ ವಸೂಲಿ ಮಾಡುವ ತಂತ್ರವೇ ಎನ್ನುವ ಗುಮಾನಿಯೂ ಇದೆ. ಸ್ಥಳೀಯ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಗುಂಡು ಹಾರಿಸಿ ಭೀತಿ ಉಂಟು ಮಾಡಿರುವ ಹಿಂದಿನ ಉದ್ದೇಶವೇನೆಂಬುದು ಬೆಳಕಿಗೆ ಬರಬೇಕಾಗಿದೆ.












Click it and Unblock the Notifications