ರಾಷ್ಟ್ರಧ್ವಜದ ಮೇಲೆ ಸಿಎಂ : ರಾಮ್‌ದಾಸ್ ಕ್ಷಮೆಯಾಚನೆ

H VIshwanath showing the pamphlet
ಮೈಸೂರು, ಆ. 16 : ಮೈಸೂರಿನ ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಕರಪತ್ರದಲ್ಲಿ ರಾಷ್ಟ್ರಧ್ವಜದ ಮೇಲೆ ಸಿಎಂ ಸದಾನಂದರವರ ಚಿತ್ರವನ್ನು ಪ್ರಕಟಿಸಿದ ವಿಚಾರ ಅಸಮಾಧಾನಕ್ಕೆ ಕಾರಣವಾಗಿ ಕಾರ್ಯಕ್ರಮ ಗೊಂದಲದಲ್ಲಿ ನಡೆಯುವಂತಾಯಿತು.

ಸೋಮವಾರ ಬೆಳಿಗ್ಗೆ ಧ್ವಜರೋಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮ್‌ದಾಸ್‌ರವರು ಧ್ವಜಾರೋಹಣ ನೆರವೇರಿಸಿದರು. ಇದೇ ವೇಳೆಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಗೆ "ಸ್ವಾತಂತ್ರ್ಯೋತ್ಸವದ ಸಂದೇಶ" ಎಂಬ ಕರಪತ್ರವನ್ನು ಹಂಚಲಾಯಿತು. ಈ ಕರಪತ್ರದ ಮೇಲ್ಭಾಗದಲ್ಲಿ ಸಿಎಂ ಸದಾನಂದ ಗೌಡರ ಭಾವಚಿತ್ರವಿದ್ದರೆ, ಕೆಳಭಾಗದಲ್ಲಿ ರಾಷ್ಟ್ರಧ್ವಜವನ್ನು ಪ್ರಕಟಿಸಲಾಗಿತ್ತು. ಇದನ್ನು ನೋಡಿದ ಸಂಸದ ಎಚ್.ವಿಶ್ವನಾಥ್ ಅವರು ಅಸಮಾಧಾನಗೊಂಡರು. ಅಲ್ಲದೆ ಇದನ್ನು ವಿರೋಧಿಸಿ ಕರಪತ್ರವನ್ನು ಹರಿದು ಪ್ರತಿಭಟನೆಯನ್ನು ಕೂಡ ನಡೆಸಿದರು. ಇದಕ್ಕೆ ಕೆಲವು ಕಾಂಗ್ರೆಸ್ಸಿಗರು ಸಾಥ್ ನೀಡಿದರು.

ಈ ಬಗ್ಗೆ ಜಿಲ್ಲಾಧಿಕಾರಿ ಪಿ.ಆರ್.ವಸ್ತ್ರದ್ ಅವರನ್ನು ವಿಚಾರಿಸಿದಾಗ ಈ ಬಗ್ಗೆ ನಮಗೆ ಗೊತ್ತಿಲ್ಲ. ಜಿಲ್ಲಾಡಳಿತದಿಂದ ಕರಪತ್ರವನ್ನು ಮುದ್ರಿಸಿಲ್ಲ ನಮಗೂ ಇದಕ್ಕೂ ಸಂಬಂಧವಿಲ್ಲ ಎಂದು ಹೇಳಿ ನುಣುಚಿಕೊಂಡರು. ಈ ಪ್ರಕರಣ ಇನ್ನಷ್ಟು ತೀವ್ರಗೊಳ್ಳುವ ಸೂಚನೆಯನ್ನು ಅರಿತ ಉಸ್ತುವಾರಿ ಸಚಿವ ಎಸ್.ಎ.ರಾಮ್‌ದಾಸ್ ಅವರು ಕರಪತ್ರವನ್ನು ನಮ್ಮ ಕಛೇರಿಯಿಂದಲೇ ಪ್ರಕಟಿಸಿರುವುದಾಗಿಯೂ ಅದರಲ್ಲಿ ಸಿಎಂರವರ ಚಿತ್ರವನ್ನು ರಾಷ್ಟ್ರಧ್ವಜದ ಮೇಲೆ ಪ್ರಕಟಿಸಿರುವುದಕ್ಕೆ ಕ್ಷಮೆಯಾಚಿಸುವ ಮೂಲಕ ಪ್ರಕರಣಕ್ಕೆ ತೆರೆ ಎಳೆದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+