ಕೈದಿಗಳ ಅದಲುಬದಲು: ಕೃಷ್ಣಗೆ ಅರಳುಮರಳೋ!?

ರಾಜ್ಯಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಸಿಪಿಎಂ ಸದಸ್ಯೆ ಬೃಂದಾ ಕಾರಟ್ ಅವರು ಪಾಕ್ ಜೈಲಿನಲ್ಲಿರುವ ಸರಬ್ಜಿತ್ ಸಿಂಗ್ ಬಗ್ಗೆ ಪ್ರಶ್ನೆ ಕೇಳಿದ್ದರು. ಇದಕ್ಕೆ ಕೃಷ್ಣ ನೀಡಿದ ಈ ಉತ್ತರದಿಂದ ಸದಸ್ಯರಲ್ಲಿ ಗೊಂದಲ ಉಂಟಾಯಿತು. ಆಗ ಖುದ್ದು ಪ್ರಧಾನಿ ಮನಮೋಹನ್ ಸಿಂಗ್ ಅವರೇ ಮಧ್ಯ ಪ್ರವೇಶಿಸಿ ಗೊಂದಲ ನಿವಾರಿಸಿದರು.
ಇತ್ತೀಚೆಗೆ ಕೃಷ್ಣ ಅವರು ಇಂತಹ 'ಮರೆಗುಳಿ' ಪ್ರಸಂಗಗಳಲ್ಲಿ ಹೆಚ್ಚಾಗಿ ಸಿಲುಕುತ್ತಿದ್ದಾರೆ. ಕಳೆದ ವರ್ಷ ವಿಶ್ವಸಂಸ್ಥೆ ಶೃಂಗಸಭೆಯಲ್ಲಿ ಯಾರದೋ ಭಾಷಣವನ್ನು ತಮ್ಮದೆಂದೇ ವಾಚನ ಮಾಡಿದ್ದರು. ಮೊನ್ನೆ ಪ್ರತಿಷ್ಠಿತ ಸುದ್ದಿಸಂಸ್ಥೆಯ ಮೇಲೂ ಗರಂ ಆಗಿ ಸದನದ ಕಲಾಪ ಕುರಿತಾದ ವರದಿಗಳ ಬಗ್ಗೆ ಸಚಿವರೊಬ್ಬರು ಕಾನೂನು ಕ್ರಮದ ಬೆದರಿಕೆ ಹಾಕಿದ ಮೊದಲ ಪ್ರಕರಣವನ್ನೂ ದಾಖಲಿಸಿದರು.











Click it and Unblock the Notifications