ವಿಜಯ್ ಸಾಲಸ್ಕರ್ ಪುತ್ರಿಗೆ ಕೊನೆಗೂ ಮಹಾ ಉದ್ಯೋಗ

2008ರ ನವೆಂಬರ್ 26ರಂದು ಪಾಕ್ ಮೂಲದ ಉಗ್ರರು ಮುಂಬೈ ಮೇಲೆ ದಾಳಿ ಮಾಡಿದಾಗ ಮುಂಚೂಣಿಯಲ್ಲಿ ನಿಂತು ಹೋರಾಡಿದ್ದ ವಿಜಯ್ ಸಾಲಸ್ಕರ್ ಉಗ್ರರ ಗುಂಡಿಗೆ ಬಲಿಯಾಗಿದ್ದರು. ಆಗ ಸಾಲಸ್ಕರ್ ಮನೆಗೆ ಭೇಟಿ ನೀಡಿದ್ದ ರಾಜಕಾರಣಿಗಳು ನೆರವಿನ ಭರವಸೆಯಿತ್ತಿದ್ದರು. ಆದರೆ ದಿನ ಕಳೆದಂತೆ ಈ ವಿಷಯವನ್ನು ಮರೆತೇ ಬಿಟ್ಟಿದ್ದರು.
ಈ ಬಗ್ಗೆ ಅವರ ಪುತ್ರಿ ದಿವ್ಯಾ ಸಾಲಸ್ಕರ್ ಹಲವು ಬಾರಿ ಮನವಿ ಮಾಡಿದರೂ ಮಹಾರಾಷ್ಟ್ರ ಸರ್ಕಾರ ತಲೆಕೆಡಿಸಿಕೊಂಡಿರಲೇ ಇಲ್ಲ. ಆದರೆ ಇತ್ತೀಚಿಗೆ ಈ ವಿಷಯ ಕೇಂದ್ರ ಗೃಹ ಸಚಿವ ಚಿದಂಬರಂ ಗಮನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ಜೊತೆ ಚರ್ಚಿಸಿದ್ದ ಅವರು ಶೀಘ್ರ ಸಾಲಸ್ಕರ್ ಪುತ್ರಿಗೆ ಕೆಲಸ ನೀಡಲು ಸೂಚಿಸಿದ್ದರು.












Click it and Unblock the Notifications