ಸಮ್ಮೋಹ ಮಾಡಿ ಸಂಭೋಗಿಸಿದ ಹಜರತ್ ಬಾಬಾಗೆ ಗೂಸಾ

ಆರೋಪಿ ಹಜರತ್ ಮೊಹಮದ್ ವಲೀವುಲ್ಲಾ ಸಮೀರುಲ್ಲಾ ಸಹ ಇದೇ ಬಡಾವಣೆಯವನು. ಹೆಂಗೆಳೆಯರಿಂದ ಗೂಸಾ ತಿಂದು ಮೇಯೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಬಾಧಿತ ಯುವತಿ 11 ಮಕ್ಕಳ ಪೈಕಿ ಕೊನೆಯವಳು. ಅವಳ ಅಪ್ಪ-ಅಮ್ಮ ಎಷ್ಟೂ ಗಂಡುಗಳನ್ನು ನೋಡಿದರೂ ಯಾವುದೂ ಬರಕತ್ತಾಗಲಿಲ್ಲ. ಇದರಿಂದ ಬೇಸತ್ತ ಯುವತಿ ಜೂನ್ ಮೊದಲ ವಾರದಲ್ಲಿ ಬಾಬಾ ಬಳಿ ತನ್ನ ಗೋಳನ್ನು ನಿವೇದಿಸಿಕೊಂಡಳು.
ಬಾಬಾ, ರಾತ್ರಿ ವೇಳೆ ಮನೆಗೆ ಬರುವಂತೆ ಯುವತಿಗೆ ಪುಸಲಾಯಿಸಿದ. ಅಲ್ಲಿ ಒಂದಷ್ಟು ಮಂತ್ರಗಳನ್ನು ಹೇಳುತ್ತಾ ಯುವತಿಯ ಮೇಲೆ ಹಿಪ್ನಾಟಿಸಂ ಮಾಡಿ, ತನ್ನ ಕಾರ್ಯಾಚರಣೆಗೆ ಇಳಿದಿದ್ದ. ಯುವತಿಯು ಭೌತಿಕವಾಗಿ ಬಾಬಾ ವಶವಾದಳು. ಕೆಲವೊಂದು ಭಂಗಿಗಳಲ್ಲಿ ಫೋಟೋಗಳನ್ನೂ ತೆಗೆದಿದ್ದ. ಆ ಫೋಟೋಗಳನ್ನು ತೋರಿಸಿ, ನನ್ನನ್ನು ಬ್ಲ್ಯಾಕ್ ಮೇಲ್ ಮಾಡತೊಡಗಿದ್ದ. ಕೊನೆಗೆ ಅತ್ಯಾಚಾರವನ್ನೂ ಮಾಡಿದ ಎಂದು ಯುವತಿ ಪೊಲೀಸರಿಗೆ ದೂರು ಮೂಲಕ ತಿಳಿಸಿದ್ದಾಳೆ.
ಅಪಾಯವನ್ನರಿತ ಯುವತಿ ಘಟನೆಯ ಬಳಿಕ ಬಾಬಾನತ್ತ ಸುಳಿಯುವುದನ್ನು ಬಿಟ್ಟಳು. ಆದರೆ ಅವ ಫೋಟೋ ತೋರಿಸಿ, ಬೆದರಿಕೆಯೊಡ್ಡತೊಡಗಿದ. ಅಷ್ಟೇ ಅಲ್ಲ 30,000 ರುಪಾಯಿ ಹಣ ನಿಡುವಂತೆಯೂ ಪೀಡಿಸತೊಡಗಿದ. ಜತೆಗೆ, ಮದುವೆಗೆಂದು ತೆಗೆದಿರಿಸಿರುವ ಆಭರಣಗಳನ್ನೂ ಕೊಡುವಂತೆ ಕೇಳಿದ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.
ಆದರೆ ಯುವತಿ ಇದ್ಯಾವುದಕ್ಕೂ ಬಗ್ಗಲಿಲ್ಲ. ಕೊನೆಗೆ ಮನೆಯವರಿಗೂ ಕಳೆದ ಗುರುವಾರ ವಿಷಯ ತಿಳಿಸಿದಳು. ನೆರೆಹೊರೆಯವರೂ ಜತೆಯಾಗಿ ಪೊಲೀಸರ ಸಹಾಯ ಪಡೆಯುವುದಕ್ಕೂ ಮುನ್ನ ಬಾಬಾ ಮನೆಗೆ ತೆರಳಿ, ಅವನಿಗೆ ಸರಿಯಾಗಿ ಗೂಸಾ ಕೊಟ್ಟರು. ಸ್ವಲ್ಪ ಸಮಯದ ನಂತರ ಬಂದ ಪೊಲೀಸರು ಬಾಬಾನನ್ನು ಆಸ್ಪತ್ರೆಗೆ ಸೇರಿಸಿ, ಅವನ ವಿರುದ್ಧ ಕೇಸು ದಾಖಲಿಸಿದ್ದಾರೆ.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications