ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನಗೆ ಮೋಕ್ಷ ಕೊಡಿ: ಮಹಾಜನತೆಯಲ್ಲಿ ದೇವೇಗೌಡ ಭಿಕ್ಷೆ

By Srinath
|
Google Oneindia Kannada News

devegowda-kumarswamy
ಬೆಂಗಳೂರು ಜು 18: 'ಪಕ್ಷ ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬರದಿದ್ದರೆ ತಮಗೆ ಮೋಕ್ಷ ಸಿಗುವುದಿಲ್ಲ' ಎಂಬ ಗಂಭೀರ ಚಿಂತನೆಯನ್ನು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಹರಿಯಬಿಟ್ಟಿದ್ದಾರೆ. 'ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದರೆ ಮಾತ್ರ ಪಕ್ಷಕ್ಕೆ ಉಳಿಗಾಲ ಇರುತ್ತದೆ. ಆದ್ದರಿಂದ ಕಾರ್ಯಕರ್ತರು ಪಕ್ಷದ ಸಂಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು' ಎಂದು ಅವರು ಕರೆ ನೀಡಿದರು.

'ಸಾಯುವ ಮುನ್ನ ಪ್ರತಿಯೊಬ್ಬ ಮನುಷ್ಯ ಸಹ ಒಂದು ಆಸೆ ಇಟ್ಟುಕೊಂಡಿರುತ್ತಾನೆ. ಅದು ಈಡೇರಿದರೆ ಮಾತ್ರ ಆತನಿಗೆ ಮೋಕ್ಷ ಸಿಗುತ್ತದೆ. ಅದೇ ರೀತಿಯಲ್ಲಿ ನಾನು, ಪಕ್ಷ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಬೇಕೆಂಬ ಕನಸು ಕಾಣುತ್ತಿದ್ದೇನೆ. ಆ ನನ್ನ ಆಸೆ ಈಡೇರದೆ ಹೋದಲ್ಲಿ... ನನಗೆ ಮೋಕ್ಷ ಸಿಗುವುದಿಲ್ಲ' ಎಂದು ಪಕ್ಷದ ಸಭೆಯಲ್ಲಿ ಭಾನುವಾರ ಹೇಳಿದ್ದಾರೆ.

ಇದೇ ವೇಳೆ, ರಾಜ್ಯದಲ್ಲಿ ಮುಂದಿನ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ ಜೆಡಿಎಸ್‌ ಪಕ್ಷವನ್ನು ನಿರ್ನಾಮ ಮಾಡಿ ಬಿಡುತ್ತದೆ ಎಂದು ಆತಂಕ ವ್ಯಕ್ತಪಡಿಸಿದ ಗೌಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯ ಜನಪ್ರಿಯತೆ ಮತವಾಗಿ ಪರಿವರ್ತನೆಯಾಗುತ್ತಿಲ್ಲವೆಂದು ವಿಷಾದಿಸಿದರು.

English summary
Former PM Devegowda has said the party should focus on building up the organisation for the next Assembly polls. “My last wish is to see JDS comes to power in the state.You all have to gear up and work to realise it. If workers fail to bring JDS back to power and if BJP retains power, JDS will face tough days,” the former Prime Minister said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X