ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 36 ಡೆಂಗ್ಯೂ ಪ್ರಕರಣ

ಮೂಲ್ಕಿಯಲ್ಲಿರುವ ಬಿಜಾಪುರ ಕಾಲನಿಯಲ್ಲಿ (ಲಿಂಗಪ್ಪಯ್ಯ ಕಾಡು) ಎರಡು ತಿಂಗಳ ಹಿಂದೆ ಮೂರು ವರ್ಷದ ಬಾಲಕಿ ಮೃತಪಟ್ಟಿದ್ದಳು, ಗುರುವಾರ ಮಂಗಳೂರಲ್ಲಿ ಕಾಲೇಜು ಬಾಲಕಿ ಸ್ವಪ್ನಾ (19) ಮೃತಪಟ್ಟಿದ್ದಾಳೆ.
ಜ್ವರ ಬಂದ ತಕ್ಷಣ ಸೂಕ್ತ ಚಿಕಿತ್ಸೆ ಮೂಲಕ ಈ ರೋಗ ತಡೆಗಟ್ಟಲು ಸಾಧ್ಯವಿದೆ ಎಂದು ಶ್ರೀರಂಗಪ್ಪ ಹೇಳಿದ್ದಾರೆ. ಡೆಂಗ್ಯೂ ಹರಡುವುದನ್ನು ಮುನ್ನೆಚ್ಚರಿಕೆ ಕ್ರಮದಿಂದ ಮಾತ್ರ ತಡೆಗಟ್ಟಲು ಸಾಧ್ಯ. ಈ ಕಾಯಿಲೆಗೆ ನಿರ್ದಿಷ್ಟವಾದ ಔಷಧಿ ಇಲ್ಲವಾದ್ದರಿಂದ ಜ್ವರದ ಲಕ್ಷಣಗಳನ್ನು ಪರಿಶೀಲಿಸಿ ಸಕಾಲದಲ್ಲಿ ಚಿಕಿತ್ಸೆ ನೀಡಬೇಕಾಗಿರುತ್ತದೆ, ಈ ನಿಟ್ಟಿನಲ್ಲಿ ಸಾರ್ವಜನಿಕರು ಸಹಕರಿಸುವಂತೆ ಅವರು ಮನವಿ ಮಾಡಿದ್ದಾರೆ. [ಡೆಂಗ್ಯೂ ಮತ್ತು ಚಿಕುನ್ ಗುನ್ಯಾ ಬಗ್ಗೆ ಎಚ್ಚರಿಕೆ ಕ್ರಮ]












Click it and Unblock the Notifications