Get Updates
Get notified of breaking news, exclusive insights, and must-see stories!

ನಂಬಿಕೆ ಇಲ್ಲದಿದ್ದರೆ ಬದುಕ್ಕಿದ್ದೂ ಸತ್ತಂತೆ; ಕುಮಾರಸ್ವಾಮಿ

HD Kumaraswamy
ಬೆಂಗಳೂರು, ಜು.9: ಆಣೆ ಪ್ರಮಾಣ ಮಾಡಿದ್ದಾಯ್ತು. ಈಗ ಆಮರಣಾಂತರ ಉಪವಾಸ ಸತ್ಯಾಗ್ರಹಕ್ಕೆ ಕುಳಿದಿದ್ದಾರೆ ಮಾಜಿ ಸಿಎಂ ಕುಮಾರಸ್ವಾಮಿ. ತಮ್ಮ ವಿರುದ್ಧ ಯಡಿಯೂರಪ್ಪ ಸರಕಾರ ರು.1,500 ಕೋಟಿ ಅಕ್ರಮ ಆಸ್ತಿ ಆರೋಪ ಮಾಡಿದೆ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿ ಕುಮಾರಸ್ವಾಮಿ ಶನಿವಾರ (ಜು.8) ಫ್ರೀಡಂ ಪಾರ್ಕ್‌‍ನಲ್ಲಿ ಆಮರಣಾಂತರ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಎಚ್ಡಿಕೆ, ಜನರ ನಂಬಿಕೆ ಇಲ್ಲದಿದ್ದರೆ ಬದುಕಿದ್ದೂ ಸತ್ತಂತೆ. ಬಿಜೆಪಿ ಸರಕಾರ ನಮ್ಮ ಕುಟುಂಬದ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಘನತೆ ಗೌರವ ಇದ್ದರೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲಿ ಎಂದರು.

ನಮ್ಮ ಕುಟುಂಬದ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಸಾರ್ವಜನಿಕರಲ್ಲಿ ತಪ್ಪು ಕಲ್ಪನೆ ಉಂಟುಮಾಡಿದ್ದಲ್ಲದೆ, ನಮ್ಮ ಕುಟುಂಬದ ಗೌರವವನ್ನು ಹಾಳು ಮಾಡುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಈ ಕಳಂಕದ ಹಿನ್ನೆಲೆಯಲ್ಲಿ ನಾನು ನಿರಶನ ಕೂತಿದ್ದೇನೆ ಎಂದರು. ಶನಿವಾರ ಬೆಳಗ್ಗೆ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸತ್ಯಾಗ್ರಹ ಆರಂಭಿಸಿದರು.

ತಮ್ಮ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಆರೋಪದಿಂದ ಮುಕ್ತನಾಗಲು ಈ ಸತ್ಯಾಗ್ರಹ ನಡೆಸುತ್ತಿರುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ. ವಿಧಾನಸೌಧದ ಮುಂದೆ ಅಥವಾ ಶಾಸಕರ ಭವನದ ಮುಂದಿನ ಬಸವೇಶ್ವರ ಪ್ರತಿಮೆ ಮುಂದೆ ಧರಣಿ ಸತ್ಯಾಗ್ರಹ ಹೂಡಲು ನಿರ್ಧರಿಸಿದ್ದರು. ಪೊಲೀಸರು ನಿರಾಕರಿಸಿದ ಕಾರಣ ಕಡೆಗೆ ಫ್ರೀಡಂಪಾರ್ಕ್‌‍ನ್ನು ಎಚ್ಡಿಕೆ ಆಯ್ಕೆ ಮಾಡಿಕೊಂಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+