ಯಡಿಯೂರಪ್ಪ ದಾನಧರ್ಮದ ಫಲ ಅವ್ರ ಕುರ್ಚಿ ಉಳಿಸಿದೆ

ಸಾಗರ ತಾಲೂಕು ವರದಹಳ್ಳಿ ಶ್ರೀಧರಾಶ್ರಮ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅಧಿಕಾರಕ್ಕೆ ಬಂದಾಗಿನಿಂದ ಸಂಕಷ್ಟ ಎದುರಿಸುತ್ತಿದ್ದಾರೆ. ಸರ್ಕಾರ ಬಿದ್ದೇ ಬಿಟ್ಟಿತು ಎನ್ನುವಂತಹ ಸಂದರ್ಭ ಸಾಕಷ್ಟು ಸಲ ಎದುರಾಗಿತ್ತು. ಆದರೆ ಅವರು ಬಚಾವಾಗುತ್ತಿದ್ದಾರೆ. ಇದಕ್ಕೆಲ್ಲ ಯಾವ ರಾಜಕೀಯ ಅಥವಾ ವೈಜ್ಞಾನಿಕ ಕಾರಣವೂ ಇಲ್ಲ. ಬದಲಾಗಿ ಮಠಮಾನ್ಯಗಳಿಗೆ, ಗೋಶಾಲೆಗಳಿಗೆ ನೀಡಿದ ಉದಾರ ದಾನವೇ ಕಾರಣ ಎಂದರು.
ರಾಘವೇಶ್ವರ ಸ್ವಾಮಿ ಮಾತಿನಿಂದ ಸಭೆಯಲ್ಲಿದ್ದ ಅನೇಕರು ತಬ್ಬಿಬ್ಬಾದಂತೆ ಕಂಡು ಬಂದರು. ಆದರೆ ಭಕ್ತವೃಂದವೇ ಯಾರೂ ಸ್ವಾಮೀಜಿಯನ್ನು ಪ್ರಶ್ನಿಸುವ ಗೋಜಿಗೆ ಹೋಗಲಿಲ್ಲ. ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲಿ ಎರಡು ಗೋಶಾಲೆ ಆರಂಭಿಸಲಾಗುವುದು. ಅದಕ್ಕೆ ತಲಾ 5 ಲಕ್ಷ ರೂ ಅನುದಾನ ಬಿಡುಗಡೆ ಮಾಡಲಾಗುವುದು. ವರದಹಳ್ಳಿಯ ಗೋಶಾಲೆಗೆ ಪ್ರಪ್ರಥಮವಾಗಿ ಈ ಹಣ ಬಿಡುಗಡೆ ಮಾಡಲಾಗಿದೆ ಎಂದು ಯಡಿಯೂರಪ್ಪ ಅವರು ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications