ಕೇಂದ್ರ ಹಚ್ಚಿದ ಬೆಂಕಿಗೆ ತುಪ್ಪ ಸುರಿದ ಸಚಿವ ಅಶೋಕ

KSRTC, BMTC fare hike
ಬೆಂಗಳೂರು ಜೂ 26: ಕೇಂದ್ರದ ಯುಪಿಎ ಸರ್ಕಾರ ಆರನೇ ಬಾರಿ ಡೀಸೆಲ್‌ ಬೆಲೆ ಏರಿಕೆ ಮಾಡಿ ದಾಖಲೆ ಮಾಡಿದ ಬೆನ್ನಲ್ಲೇ ರಾಜ್ಯ ಸರ್ಕಾರ ಸಾರಿಗೆ ಸಂಸ್ಥೆಯ ನಾಲ್ಕು ವಿಭಾಗಗಳ ಪ್ರಯಾಣ ದರವನ್ನು ಹೆಚ್ಚಿಸಿದೆ. ಜನಸಾಮಾನ್ಯರ ಹೊಟ್ಟೆಗೆ ಕೇಂದ್ರ ಸರ್ಕಾರ ಹಚ್ಚಿದ ಬೆಂಕಿಗೆ ರಾಜ್ಯ ಸಾರಿಗೆ ಸಚಿವ ಆರ್ ಅಶೋಕ್ ಅವರು ತಕ್ಷಣವೇ ತುಪ್ಪ ಸುರಿದು ಒಡಲ ಉರಿಯನ್ನು ಹೆಚ್ಚಿಸಿದ್ದಾರೆ.

ರಾಜ್ಯ ಸರ್ಕಾರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳ ಪ್ರಯಾಣ ದರ ಶನಿವಾರ ಮಧ್ಯ ರಾತ್ರಿಯಿಂದಲೇ ಜಾರಿ ಬಂದಿದ್ದು, ಶೇ.7ರಷ್ಟು ಹೆಚ್ಚಳವಾಗಿದೆ. ಬಿಎಂಟಿಸಿ, ಕೆಎಸ್ ಆರ್ ಟಿಸಿ, ವಾಯುವ್ಯ ಸಾರಿಗೆ ಮತ್ತು ಈಶಾನ್ಯ ಸಾರಿಗೆ ಬಸ್ ಗಳ ಪ್ರಯಾಣದಲ್ಲಿ ಶೇ.5.12 ರಿಂದ ಶೇ 6.95ರಷ್ಟು ಏರಿಕೆಯಾಗಿದೆ. ವೋಲ್ವೋ ಬಸ್ ದರದಲ್ಲಿ ಶೇ 8 ರಷ್ಟು ದರ ಏರಿಕೆ ಕಂಡಿದೆ.

ಸಾಮಾನ್ಯ ಸಾರಿಗೆ ದರದಲ್ಲಿ ಶೇ 5.12, ರಾಜಹಂಸ ಬಸ್ ಪ್ರಯಾಣ ದರ ಶೇ 6.95 ಹಾಗೂ ಬಿಎಂಟಿಸಿ ದರದಲ್ಲಿ ಮೊದಲ ಹಂತ ಹೊರತುಪಡಿಸಿ ನಂತರದ ಸ್ಟೇಜ್ ಗಳಲ್ಲಿ ರು 1 ರಿಂದ 2ರಷ್ಟು ಏರಿಕೆ ಆಗಿದೆ. ಬಿಎಂಟಿಸಿ ದಿನದ ಪಾಸ್, ಮಾಸಿಕ ಬಸ್ ದರ ಕೂಡ ಹೆಚ್ಚಳ ಕೊಂಡಿದೆ.ಗುರುತಿನ ಚೀಟಿ ಇರುವ ದಿನದ ಪಾಸ್ ದರ 35 ರು.ನಿಂದ 40 ರು. ಗುರುತಿನ ಚೀಟಿ ಇಲ್ಲದ್ದು 45ರು ಹಾಗೂ ವಜ್ರ ಗೋಲ್ಡ್ ದರ 90 ರು.ಗಳಾಗಿದೆ.

ವೇಗದೂತ
ರಾಜಹಂಸ
ಊರಿನ ಹೆಸರು ಹಿಂದಿನ ದರ(ರೂ.ಗಳಲ್ಲಿ) ಈಗಿನ ದರ ಹಿಂದಿನ ದರ ಈಗಿನ ದರ
ಮೈಸೂರು 95 101 143 153
ಮಂಗಳೂರು 237 253 357 385
ಹುಬ್ಬಳ್ಳಿ 273 291 413 444
ಮಂಡ್ಯ 67 72 100 107
ಧಾರವಾಡ 284 304 431 464
ಗುಲ್ಬರ್ಗಾ 412 441 628 676
ಬಳ್ಳಾರಿ 213 227 321 345
ದಾವಣಗೆರೆ 182 193 271 292
ಶಿವಮೊಗ್ಗ 193 206 290 312
ಬೆಳಗಾವಿ 332 355 505 544
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+