ತಣ್ಣೀರುಬಾವಿ : ಮೂರು ಮಂದಿ ನೀರು ಪಾಲು

ತಿಲಕ್, ಸಂತೋಷ್ ಹಾಗೂ ದೀಪಕ್ ಸಮುದ್ರದಲ್ಲಿ ನಾಪತ್ತೆಯಾಗಿರುವ ಯುವಕರು. ಇವರ ಮೃತ ದೇಹಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಇವರ ಪೈಕಿ ಓರ್ವ ರಜೆಯಲ್ಲಿ ಮುಂಬೈನಿಂದ ಮಂಗಳೂರಿಗೆ ಬಂದಿದ್ದ.
ಸಮುದ್ರದಲ್ಲಿ ಈಜಾಡುವ ಸಾಹಸಕ್ಕೆ ಇಳಿಯಬಾರದೆಂದು ಎಚ್ಚರಿಕೆ ನೀಡಿದ್ದರೂ ಯುವಕರು ನೀರಿಗೆ ಇಳಿದಿದ್ದಾರೆನ್ನಲಾಗಿದೆ. ಪೊಲೀಸರು ಮತ್ತು ನುರಿತ ಈಜುಗಾರರು ಅವರ ಹುಡುಕಾಟದಲ್ಲಿ ನಿರತರಾಗಿದ್ದಾರೆ. ಹೆಚ್ಚಿನ ವಿವರಗಳಿಗಾಗಿ ನಿರೀಕ್ಷಿಸಲಾಗುತ್ತಿದೆ.












Click it and Unblock the Notifications