ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಲಿಂಗಾಯತರು ವೀರಶೈವಕ್ಕೆ ಸೇರ್ಪಡೆಯಾಗಬೇಕು:ಶೆಟ್ಟರ್
ನಗರದ ಕೊಳದ ಮಠದಲ್ಲಿ ಇತ್ತೀಚೆಗೆ ಶಿವಮ್ಮನವರ ಸಂಸ್ಮರಣೆ ಅಂಗವಾಗಿ ಹಮ್ಮಿಕೊಂಡಿದ್ದ ಅಖಿಲ ಕರ್ನಾಟಕ ಭಜನಾ ಕಲಾವಿದರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಉಪ ಜಾತಿಗಳಿಂದ ಸಮಾಜ ಛಿದ್ರವಾಗುತ್ತದೆ. ಹಾಗಾಗಿ, ಉಪಜಾತಿಗಳ ವೈಭವೀಕರಣ ಸಲ್ಲದು. ಎಲ್ಲವೂ ವೀರಶೈವದಲ್ಲಿ ಸಮ್ಮಿಳಿತಗೊಳ್ಳಬೇಕು. ಆಗ ಮಾತ್ರ ವೀರಶೈವ ಸಮಾಜ ಶಾಶ್ವತವಾಗಿ ನೆಲೆಯೂರಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಇಂದು ಬಸವಣ್ಣನ ಜಯಂತಿ ಆಚರಣೆಗಳು ಆಗುತ್ತಿವೆ. ಆದರೆ, ಆತ ಸಾರಿದ ಸಂದೇಶಗಳನ್ನು ಪಾಲಿಸುತ್ತಿಲ್ಲ. ಬಸವಣ್ಣನ ತತ್ವಗಳನ್ನು ವೈಯಕ್ತಿಕವಾಗಿ ಪ್ರತಿಯೊಬ್ಬರೂ ಅಳವಡಿಸಿಕೊಂಡರೆ ಮಾತ್ರ ಇಡೀ ವ್ಯವಸ್ಥೆಯ ಬದಲಾವಣೆ ಸಾಧ್ಯ ಎಂದರು.
Comments
English summary
Karnataka rural and panchayath minister Jagadish Shettar has sadi that popular Hindu sects Veerashaiva and Lingayats at loggerheads as such Lingayats should join Veerashaiva, he opined.
Story first published: Thursday, June 16, 2011, 8:11 [IST]