ಗೆರೆಗಳ ತಜ್ಞ, ಸೊಗಸುಗಾರ ಎಂಎಫ್ ಹುಸೇನ್ ನಿಧನ

ಸೆಪ್ಟೆಂಬರ್ 17, 1915ರಲ್ಲಿ ಪಂಧರ್ ಪುರ್ ನಲ್ಲಿ ಜನಿಸಿದ ಹುಸೇನ್, ಜಗತ್ತು ಕಂಡ ಉತ್ತಮ ಕಲಾವಿದರಲ್ಲಿ ಒಬ್ಬರು. 70ರ ದಶಕದಲ್ಲಿ ಹಿಂದೂ ವಿರೋಧಿ ನಗ್ನ ದೇವತೆಗಳನ್ನು ಚಿತ್ರಿಸಿ ಕುಖ್ಯಾತಿ ಗಳಿಸಿದರು. ನಂತರ 2006ರಲ್ಲಿ ಭಾರತವನ್ನು ತೊರೆದು ಕತಾರ್ ನಲ್ಲಿ ನೆಲೆಸಿ ಅಲ್ಲಿನ ಪೌರತ್ವ ಪಡೆದಿದ್ದರು. ಭಾರತದಲ್ಲಿ ಹುಸೇನ್ ವಿರುದ್ಧ ಇವರ ಮೊಕದ್ದಮೆಗಳು ಇನ್ನೂ ಬಾಕಿ ಇದ್ದು ಅವರ ಆಸ್ತಿ ಪಾಸ್ತಿ ಕೋರ್ಟ್ ಪಾಲಾಗಿದೆ.
ಬೆಂಗಾಲ್ ಸ್ಕೂಲ್ ಆಫ್ ಆರ್ಟ್ ನ ಕಲಾವಿದರಾದ ಹುಸೇನ್ ಜೂರಿಚ್ ನಲ್ಲಿ ಚಿತ್ರ ಪ್ರದರ್ಶನ ಮಾಡಿ ಯಶಸ್ವಿಯಾಗಿದ್ದರು. ಭಾರತ ಸರ್ಕಾರ ಹುಸೇನ್ ಅವರಿಗೆ ಪದ್ಮಶ್ರೀ, ಪದ್ಮ ವಿಭೂಷಣ್ ಪ್ರಶಸ್ತಿ ನೀಡಿ ಗೌರವಿಸಿದೆ.ರಾಜಾ ರವಿವರ್ಮ ಪ್ರಶಸ್ತಿ ಕೂಡಾ ಪಡೆದಿದ್ದರು.
ಬಾಲಿವುಡ್ ನಂಟು: ಮಾಧುರಿ ದೀಕ್ಷಿತ್ ರನ್ನು ಸಿಕ್ಕಾಪಟ್ಟೆ ಇಷ್ಟಪಡುತ್ತಿದ್ದ ಹುಸೇನ್, ಗಜ ಗಾಮಿನಿ ಎಂಬ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದ್ದರು. ಮಾಧುರಿ ದೀಕ್ಷಿತ್ ರನ್ನು ಕಾಳಿದಾಸನ ವರ್ಣನೆಯ ಕಾವ್ಯ ಕನ್ನಿಕೆ, ಮೊನಾಲಿಸಾ ಮಂದಹಾಸ, ಬಂಡಾಯಗಾರ್ತಿ ಮುಂತಾದ ರೀತಿಯಲ್ಲಿ ಚಿತ್ರಿಸಿ ಆನಂದ ಹೊಂದಿದ್ದರು. ನಂತರ ಟಬು ನಾಯಕಿಯಾಗಿದ್ದ ಮೀನಾಕ್ಷಿ: ಟೇಲ್ ಆಫ್ ಥ್ರೀ ಸಿಟೀಸ್ ಎಂಬ ಚಿತ್ರವನ್ನು ನಿರ್ಮಿಸಿದರು. ಎಂಎಫ್ ಹುಸೇನ್ ಅವರ ಜೀವನ ಕಥೆ ಆಧಾರಿತ ಚಿತ್ರ"ದ ಮೇಕಿಂಗ್ ಆಫ್ ದ ಪೈಂಟರ್" ಚಿತ್ರ ನಿರ್ಮಾಣಗೊಳ್ಳುತ್ತಿದ್ದು, ಹುಸೇನ್ ಪಾತ್ರಾನ್ನು ಶ್ರೇಯಸ್ ತಲ್ಪಾಡೆ ನಿರ್ವಹಿಸುತ್ತಿದ್ದಾರೆ. [ವಿದ್ಯಾ ಬಾಲನ್ ನಗ್ನ ಚಿತ್ರ ಎಲ್ಲಾ ಹುಸಿ!]
ವಿವಾದಗಳು : 40ರ ದಶಕದಲ್ಲೇ ವೃತ್ತಿಪರ ಕಲಾವಿದರಾಗಿ ಹುಸೇನ್ ಕಾಣಿಸಿಕೊಂಡವರು. 90ರ ದಶಕದಲ್ಲಿ ವೃತ್ತಿ ಜೀವನದ ಉತ್ತುಂಗದಲ್ಲಿದ್ದಾಗ, ವಿವಾದಗಳು ಅವರ ಬೆನ್ನ ಹತ್ತತೊಡಗಿದವು. ಹಿಂದೂ ದೇವತೆಗಳಾದ ದುರ್ಗಾ,ಸರಸ್ವತಿ, ಹನುಮಂತ ಹಾಗೂ ಭಾರತ ಮಾತೆಯನ್ನು ಲೈಂಗಿಕ ಪ್ರಚೋದನಕಾರಿಯಾಗಿ, ನಗ್ನವಾಗಿ ಚಿತ್ರಿಸಿದ ಹುಸೇನ್, ಬಹು ಸಂಖ್ಯಾತ ಹಿಂದೂಗಳ ಆಕ್ರೋಶಕ್ಕೆ ಗುರಿಯಾದರು. ಬಜರಂಗ ದಳ, ಶಿವಸೇನೆಯಿಂದ ಹುಸೇನ್ ಮೇಲೆ ಸತತ ದಾಳಿ ನಡೆಯುತ್ತಲೇ ಇತ್ತು.
ಮೀನಾಕ್ಷಿ ಚಿತ್ರದಲ್ಲಿ ಇದ್ದ ಖವ್ವಾಲಿ ಹಾಡು ನೂರು ಉನ್ ಅಲಾ ನೂರ್ ಕೇಳಿದ ಮುಸ್ಲಿಂ ಸಂಘಟನೆಗಳು ಹುಸೇನ್ ವಿರುದ್ಧ ತಿರುಗಿ ಬಿದ್ದವು. ಕುರಾನ್ ನ ಸಾಲುಗಳನ್ನು ನೇರವಾಗಿ ಬಳಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಪ್ರತಿಭಟನೆಗಳ ಸಹ ನಡೆದವು. ಹಿಂದೂ ದೇವತೆಗಳಂತೆ ಇಸ್ಲಾಂ ದೇವರನ್ನು ನಗ್ನವಾಗಿ ಚಿತ್ರಿಸುವ ಧೈರ್ಯ ಇದೆಯೇ? ಎಂದು ಖ್ಯಾತ ಕಲಾವಿದ ಸತೀಶ್ ಗುಜ್ರಾಲ್ ಅವರು ಹುಸೇನ್ ಅವರನ್ನು ಪ್ರಶ್ನಿಸಿದ್ದರು. ಆ
ವಿವಾದಗಳಿಂದ ಬೇಸತ್ತ ಹುಸೇನ್ ಭಾರತದಿಂದ ಸ್ವಯಂ ಗಡಿಪಾರಾಗಿ ದುಬೈ, ಕತಾರ್ ನಲ್ಲಿ ನೆಲೆಸಿ, ಭಾರತಕ್ಕೆ ಮತ್ತೆ ವಾಪಾಸ್ಸಾಗುವ ಯಾವುದೇ ಆಸೆ ವ್ಯಕ್ತಪಡಿಸಲಿಲ್ಲ. ಆದರೆ, ಭಾರತದಿಂದ ದೂರಾದ ಹುಸೇನ್ ಗೆ ಭಾರತದ ಸರ್ವ ಶ್ರೇಷ್ಠ ನಾಗರೀಕ ಪ್ರಶಸ್ತಿ ಭಾರತ ರತ್ನ ನೀಡಬೇಕೆಂದು ಶಶಿ ತರೂರ್ ಸೇರಿದಂತೆ ಹಲವರು ಒತ್ತಾಯಿಸಿದ್ದು ವಿಪರ್ಯಾಸ. ಆದರೂ, ಹುಸೇನ್ ನಿಧನದಿಂದ ಒಂದು ಯುಗಾಂತ್ಯವಾಗಿ ಎಂದರೆ ತಪ್ಪಾಗಲಾರದು.
ಲೇಖನಗಳು : ಮಕ್ಬೂಲ್ ಫಿದಾ ಹುಸೇನ್ ಜೀವನ ಮತ್ತು ವಿವಾದಗಳು
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications