ಕಾದಿರುವರು ಶ್ರೀರಾಮುಲು ಬಳ್ಳಾರಿಗೆ ಸುಷ್ಮಾ ಬರುವರೆಂದು

ಬಳ್ಳಾರಿ, ಜೂ. 4 : ನಮ್ಮ ತಾಯಿ ಸುಷ್ಮಾ ಸ್ವರಾಜ್ ಅವರು ಲಖನೌನಲ್ಲಿ ನಡೆಯುತ್ತಿರುವ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಬ್ಯುಸಿಯಾಗಿದ್ದಾರೆ. ನಮ್ಮ ಸಂಪರ್ಕಕ್ಕೆ ಅವರು ಸಿಗುತ್ತಿಲ್ಲ. ಆದರೆ, ಶ್ರಾವಣ ಶುಕ್ರವಾರ ಬಳ್ಳಾರಿಗೆ ಬಂದೇ ಬರುತ್ತಾರೆ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶನಿವಾರ ಭೇಟಿಯಾದ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ತಾಯಿ, ನಮ್ಮ ದೇವರು ಸುಷ್ಮಾ ಸ್ವರಾಜ್ ಅವರು, ನಮ್ಮ ಹಾಗೂ ನಮ್ಮ ಮಿತ್ರರಾದ ರೆಡ್ಡಿ ಸಹೋದರರ ಕುರಿತು ಮಾತನಾಡಿದ ನಂತರ ನಾನು ಸಂಪರ್ಕಿಸಲು ಮಾಡಿದ ಎಲ್ಲಾ ಪ್ರಯತ್ನಗಳು ವಿಫಲವಾಗಿದೆ ಎಂದು ಅವರು ಹೇಳಿದರು.

ಆದರೆ, ಆಗಸ್ಟ್ 12ರ ಶ್ರಾವಣ ಶುಕ್ರವಾರದಂದು ಬಳ್ಳಾರಿಯಲ್ಲಿ ನಡೆಯುವ ಉಚಿತ ಸಾಮೂಹಿಕ ವಿವಾಹದಲ್ಲಿ ತಪ್ಪದೇ ಪಾಲ್ಗೊಳ್ಳುತ್ತಾರೆ. ನಾನೇ ಖುದ್ಧಾಗಿ ದೆಹಲಿಗೆ ಹೋಗಿ ಅವರನ್ನು ಆಹ್ವಾನಿಸುತ್ತೇನೆ. ನಮ್ಮಿಂದ ಏನಾದರೂ ತಪ್ಪಾಗಿದ್ದಲ್ಲಿ ಕ್ಷಮಿಸಿ ಎಂದು ಕೇಳುತ್ತೇನೆ. ರಾಜಕೀಯದಲ್ಲಿ ಕೆಲವೊಮ್ಮೆ ತಿಳಿಯದೇ ತಪ್ಪುಗಳಾಗಿರುವುದು ಸಹಜ. ಕಾರಣ ಕ್ಷಮೆ ಕೋರುತ್ತೇನೆ ಎಂದರು.

ಪ್ರತಿ ವರ್ಷ ಶ್ರಾವಣ ಶುಕ್ರವಾರ ತಪ್ಪದೇ ಬಳ್ಳಾರಿಗೆ ಬರುತ್ತೇನೆ, ಮನೆಯ ಮಗಳಾಗಿ ಇಲ್ಲಿಯೇ ವರಮಹಾಲಕ್ಷ್ಮಿ ಪೂಜೆ ನಡೆಸುತ್ತೇನೆ ಎಂದು ಅವರು ಮಾತು ನೀಡಿರುವ ಹಿನ್ನೆಲೆಯಲ್ಲಿ ಅವರು ತಪ್ಪದೇ ಬಳ್ಳಾರಿಗೆ ಬರುತ್ತಾರೆ ಎನ್ನುವ ವಿಶ್ವಾಸ ನನ್ನದು ಎಂದು ಅವರು ಹೇಳದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+