ಮಳೆ ಬಂತು ಮಾರಾಯ, ಕೊಡೆ ಹಿಡಿಯೋ ಸುಬ್ರಾಯ

ಮುಂಗಾರು ಪೂರ್ವದ ಮಳೆ ಈಗಾಗಲೇ ಅನೇಕ ಜಿಲ್ಲೆಗಳಲ್ಲಿ ಬೀಳುವುದಕ್ಕೆ ಶುರುವಾಗಿದೆ. ಬೆಂಗಳೂರಿನ ಹಲವು ಸಂಜೆಗಳು ದೀರ್ಘ ಮಳೆಗೆ ಸಾಕ್ಷಿಯಾಗಿದೆ. ಸುಬ್ರಹ್ಮಣ್ಯ, ರಾಯಚೂರು ಮುಂತಾದೆಡೆ ಈಗಾಗಲೇ ಗರಿಷ್ಠ ಮಳೆ ದಾಖಲಾಗಿದೆ. ಹೀಗಾಗಿ ರಾಜ್ಯದ ಹಲವು ಕಡೆಗಳಲ್ಲಿ ಕೃಷಿಕರು ಈಗಾಗಲೇ ಕೃಷಿ ಚಟುವಟಿಕೆ ಆರಂಭಿಸಿದ್ದಾರೆ. ಕೆಲವು ಕಡೆ ಅಸಲಿ ಬಿತ್ತನೆ ಬೀಜದ ಕೊರತೆ ಆರಂಭವಾಗಿದೆ.
ಗಾಳಿ ಸಹಿತ ಭಾರೀ ಮಳೆ ಸುರಿಯುವ ಸಾಧ್ಯತೆ ಇರುವುದರಿಂದ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ. ಒಣ ಮೀನೇ ಸಾಕು. ಮುಂದಿನ 24 ಗಂಟೆಗಳಲ್ಲಿ ರಾಜ್ಯದತ್ತ ಗಂಟೆಗೆ 45ರಿಂದ 55 ಕಿ.ಮೀ. ವೇಗದಲ್ಲಿ ರಭಸದ ಗಾಳಿ ಬೀಸಲಿದೆ.
ಕೇರಳಕ್ಕೆ ನೈರುತ್ಯ ಮಾರುತಗಳು ನಿನ್ನೇನೇ ಬಂತು. ಎರಡು ದಿನದೊಳಗೆ ಕರ್ನಾಟಕವನ್ನೂ ಚುಂಬಿಸಲಿವೆ. 2010 ರಲ್ಲಿ ರಾಜ್ಯದಲ್ಲಿ 890 ಮಿ.ಮೀ. ಮಳೆಯಾಗಿದೆ. ಈ ಬಾರಿ ಸುಮಾರು 800 ಮಿ.ಮೀ. ಸರಾಸರಿ ಮಳೆಯಾಗುವ ಸಂಭವವಿದೆ. ಅಂದರೆ 90 ಮೀಮೀ ಖೋತಾ ಬಜೆಟ್.












Click it and Unblock the Notifications