ಜನ ಲೋಕಪಾಲದ ಬಗ್ಗೆ ಕೇಂದ್ರ ನಿರಾಸಕ್ತಿ: ಹೆಗ್ಡೆ ವಿಷಾದ

ೀ ಹಿಂದೆ ಕೇಂದ್ರವು ಸೂಕ್ತವಾಗಿ ಚರ್ಚಿಸದೆಯೂ ಹಲವಾರು ಮಸೂದೆಗಳನ್ನು ಅಂಗೀಕರಿಸಿದ ಉದಾಹರಣೆಗಳಿವೆ. 2008ರ ಡಿ. 23ರಂದು ಸಂಸತ್ ನಲ್ಲಿ ಕೆಲವೇ ನಿಮಿಷಗಳಲ್ಲಿ ಬರೋಬ್ಬರಿ 17 ಮಸುದೆಗಳನ್ನು ಅಂಗೀಕರಿಸಲಾಯಿತು. ಅದರಲ್ಲಿ ಒಂದು ಮಾತ್ರ ಭ್ರಷ್ಟಾಚಾರಕ್ಕೆ ಸಂಬಂಧಿಸಿದ್ದು. ಉಳಿದವು ಯಾವ್ಯಾವ ವಿಷಯಗಳಿಗೆ ಸಂಬಂಧಿಸಿದ್ದವೆಂಬುದು ಅಂದಿನ ಸರಕಾರಕ್ಕೆ ಅರಿವಿಲ್ಲ. ಹೀಗೆ ವಿವೇಚನಾ ರಹಿತ ನಿರ್ಣಯಗಳು ಹಲವಾರು ಇವೆ.
ಕನಿಷ್ಠ ಪಕ್ಷ, ಮಸೂದೆಯಲ್ಲೇನಿದೆ? ಅದರ ಸಾಧಕ, ಭಾದಕಗಳೇನು? ಎಂಬ ಬಗ್ಗೆ ಚರ್ಚಿಸುವ ಪ್ರಯತ್ನವನ್ನಾದರೂ ಮಾಡಬೇಕಲ್ಲವೇ? ಎಂದು ಸಂತೋಷ್ ಹೆಗ್ಡೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಂವಿಜೆ ಎಂಜಿನಿಯರಿಂಗ್ ಕಾಲೇಜು ಮಂಗಳವಾರ (ಮೇ 17) ಏರ್ಪಡಿಸಿದ್ದ 84ನೇ ಸಂಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.












Click it and Unblock the Notifications