ನಮ್ಮ ವಿನಿತಳ ಮದುವೆಗೆ 6.4 ಕೋಟಿ ರು. ಖರ್ಚಾಯ್ತು..!

ಇಟಲಿಯ ಸ್ಯಾನ್ ಸೆಮೆಂಟೆ ಪ್ಯಾಲೆಸ್ ಹೋಟೆಲ್ ಆಂಡ್ ರೆಸಾರ್ಟ್ ನಲ್ಲಿ ಒಂದು ಮದುವೆ ನಡೆಯಿತು. ಅದು ಅನಿವಾಸಿ ಭಾರತೀಯರಾದ ಪ್ರಮೋದ್ ಅಗರ್ ವಾಲ್ ಪುತ್ರಿಯದ್ದು. ಜನಪ್ರಿಯ ಪಾಪ್ ಗಾಯಕಿ ಶಕೀರಾ(ಚಿತ್ರ ನೋಡಿ) ಈ ಮದುವೆಯಲ್ಲಿ ವಿಶೇಷ ಆಕರ್ಷಣೆ. ಮೋಜು ಮಸ್ತಿಗೇನೂ ಕಮ್ಮಿ ಇರಲಿಲ್ಲ. ವಿಶ್ವದ ಮೂಲೆಮೂಲೆಗಳಿಂದ ಸುಮಾರು 800 ಜನರು ಅತಿಥಿ ಅಭ್ಯಾಗತರು ಬಂದಿದ್ದರಂತೆ. ಅಂದಹಾಗೇ ಈ ಮದುವೆಗೆ ಖರ್ಚಾಗಿರೋದು ಸುಮಾರು ಆರುವರೆ ಕೋಟಿ ರೂಪಾಯಿಯಷ್ಟು.
ಇಷ್ಟೊಂದು ಖರ್ಚು ಮಾಡಿದ ಮೇಲೆ ಮದುವೆ ಅದ್ದೂರಿಯಾಗಿಯೇ ನಡೆದಿರುತ್ತದೆ ಬಿಡಿ. ಮುಂಬೈ ಮತ್ತು ದೆಹಲಿಯಿಂದ ಪ್ರಖ್ಯಾತ ಬಾಣಸಿಗರು, ಛಾಯಾಗ್ರಾಹಕರನ್ನು ಅಲ್ಲಿಗೆ ಕರೆಸಿಕೊಳ್ಳಲಾಗಿದಂತೆ. ಇಲ್ಲಿ ಪ್ರಮುಖ ಆಕರ್ಷಣೆಯಾಗಿದ್ದು ಸುಮಾರು 72 ಗಂಟೆಗಳ ಕಾಲ ಪಾಪ್ ಗಾಯಕಿ ಶಕೀರಾ ನೀಡಿದ ಕಾರ್ಯಕ್ರಮವಂತೆ. [ಓದಿ: ಜೂನಿಯರ್ ಎನ್ಟಿಆರ್ ಮದುವೆ; ಮಂಟಪಕ್ಕೇ ರು.18 ಕೋಟಿ!]
ಭಾರತೀಯ ಮದುವೆಯಲ್ಲಿ ಅಂತರ್ ರಾಷ್ಟ್ರೀಯ ಖ್ಯಾತಿಯ ಕಲಾವಿದರು ಕಾರ್ಯಕ್ರಮ ನೀಡುವುದು ಇದೇ ಮೊದಲಲ್ಲ. ಕಳೆದ ಮಾರ್ಚ್ ನಲ್ಲಿ ಕಾಜಲ್ ಫಾಬಿಯಾನಿ ಮತ್ತು ಗೌರವ್ ಮದುವೆಗೆ ಪಾಪ್ ಗಾಯಕ ಅಕಾನ್ ಕಾರ್ಯಕ್ರಮ ನೀಡಿದ್ದರು. ಶಾರೂಕ್ ಖಾನ್ ಮತ್ತು ಮಲೈಕಾ ಅರೋರಾ ಮದುವೆ ಕೂಡ ತುಂಬಾ ಗ್ರಾಂಡಾಗಿಯೇ ನಡೆದಿತ್ತು. ಕಾಂಗ್ರೆಸ್ ನಾಯಕ ಕನ್ವರ್ ಸಿಂಗ್ ತನ್ವರ್ ಮಗನ ಮದುವೆ ಕೂಡ ಐಷಾರಾಮಿ ಮದುವೆಗೆ ಇನ್ನೊಂದು ಉದಾಹರಣೆ.
ಭಾರತದ ಇತಿಹಾಸದಲ್ಲಿ ದಾಖಲಾಗಿರುವ ಅದ್ದೂರಿ ಮದುವೆಯಲ್ಲಿ ಮಿತ್ತಲ್ ಕುಟುಂಬ ಎತ್ತರದಲ್ಲಿದೆ. ಲಕ್ಷ್ಮಿ ನಿವಾಸ್ ಮಿತ್ತಲ್ ಮಗಳಾದ ವನಿಶಾ ಮಿತ್ತಲ್ ಮಗಳ ಮದುವೆ ಫ್ರಾನ್ಸ್ ನಲ್ಲಿ ಸುಮಾರು 6 ದಿನಗಳ ಕಾಲ ವೈಭವದಿಂದ ನಡೆಯಿತು. ಈ ಮದುವೆಗೆ ಅಂದಾಜು 200 ಕೋಟಿ ರೂಪಾಯಿ ಖರ್ಚಾಗಿದೆಯಂತೆ. ಬಾಲಿವುಡ್ ನಟ ನಟಿಯರು ಈ ಮದುವೆಯಲ್ಲಿ ಹಲವು ಕಾರ್ಯಕ್ರಮಗಳನ್ನು ನೀಡಿ ಅತಿಥಿಗಳನ್ನು ರಂಜಿಸಿದರಂತೆ. ಇತ್ತೀಚೆಗೆ ನಡೆದ ಸುಬಾರ್ಟೊ ರಾಯ್ ಅವರ ಮಗನ ಮದುವೆಗೆ ಸುಮಾರು 11 ಸಾವಿರ ಅತಿಥಿಗಳು ಆಗಮಿಸಿದ್ದರು. ಖರ್ಚು ಎಷ್ಟು ಕೋಟಿಯಾಗಿದೆಯೆಂದು ಸದ್ಯ ಲೆಕ್ಕ ಸಿಕ್ಕಿಲ್ಲ.
ದೇಶದ ಕ್ರಿಕೆಟ್ ಮತ್ತು ಸಿನಿಮಾ ತಾರೆಯರ ಮದುವೆ ಕೂಡ ಅದ್ದೂರಿಯಾಗಿಯೇ ನಡೆದಿದೆ. ಹೃತೀಕ್ ರೋಷನ್ ತನ್ನ ಸ್ವೀಟ್ ಹಾರ್ಟ್ ಸುಸಾನೆಯನ್ನು ಬೆಂಗಳೂರಿನ ಗೋಲ್ಡನ್ ಪಾಲ್ಮ್ ರೆಸಾರ್ಟ್ ಆಂಡ್ ಸ್ಪಾದಲ್ಲಿ ಮದುವೆಯಾಗಿದ್ದರು. ನಟಿ ಕರಿಷ್ಮಾ ಕಪೂರ್ ಮತ್ತು ಉದ್ಯಮಿ ಸಂಜಯ್ ಕಪೂರ್, ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ, ಸುನಿಲ್ ಗವಾಸ್ಕರ್ ಮಗ ರೋಹನ್ ಗವಾಸ್ಕರ್ ಮದುವೆಗಳಿಗೂ ಕೂಡ ಹಲವು ಕೋಟಿ ರೂಪಾಯಿ ಖರ್ಚು ಮಾಡಲಾಗಿತ್ತು.
ಅಜಯ್ ಜಡೇಜಾ ಮತ್ತು ಅದಿತ ಜೆಟ್ಲಿ ಮದುವೆ, ಅಂಜಲಿ ಮೆಹ್ಲಾ ಮತ್ತು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಮದುವೆ ಭಾರತದಲ್ಲಿ ನಡೆದ ಕೆಲವು ಅದ್ದೂರಿ ಮದುವೆಗಳಾಗಿವೆ.
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications