ನಮ್ಮ ವಿನಿತಳ ಮದುವೆಗೆ 6.4 ಕೋಟಿ ರು. ಖರ್ಚಾಯ್ತು..!

ಇಟಲಿಯ ಸ್ಯಾನ್ ಸೆಮೆಂಟೆ ಪ್ಯಾಲೆಸ್ ಹೋಟೆಲ್ ಆಂಡ್ ರೆಸಾರ್ಟ್ ನಲ್ಲಿ ಒಂದು ಮದುವೆ ನಡೆಯಿತು. ಅದು ಅನಿವಾಸಿ ಭಾರತೀಯರಾದ ಪ್ರಮೋದ್ ಅಗರ್ ವಾಲ್ ಪುತ್ರಿಯದ್ದು. ಜನಪ್ರಿಯ ಪಾಪ್ ಗಾಯಕಿ ಶಕೀರಾ(ಚಿತ್ರ ನೋಡಿ) ಈ ಮದುವೆಯಲ್ಲಿ ವಿಶೇಷ ಆಕರ್ಷಣೆ. ಮೋಜು ಮಸ್ತಿಗೇನೂ ಕಮ್ಮಿ ಇರಲಿಲ್ಲ. ವಿಶ್ವದ ಮೂಲೆಮೂಲೆಗಳಿಂದ ಸುಮಾರು 800 ಜನರು ಅತಿಥಿ ಅಭ್ಯಾಗತರು ಬಂದಿದ್ದರಂತೆ. ಅಂದಹಾಗೇ ಈ ಮದುವೆಗೆ ಖರ್ಚಾಗಿರೋದು ಸುಮಾರು ಆರುವರೆ ಕೋಟಿ ರೂಪಾಯಿಯಷ್ಟು.
ಇಷ್ಟೊಂದು ಖರ್ಚು ಮಾಡಿದ ಮೇಲೆ ಮದುವೆ ಅದ್ದೂರಿಯಾಗಿಯೇ ನಡೆದಿರುತ್ತದೆ ಬಿಡಿ. ಮುಂಬೈ ಮತ್ತು ದೆಹಲಿಯಿಂದ ಪ್ರಖ್ಯಾತ ಬಾಣಸಿಗರು, ಛಾಯಾಗ್ರಾಹಕರನ್ನು ಅಲ್ಲಿಗೆ ಕರೆಸಿಕೊಳ್ಳಲಾಗಿದಂತೆ. ಇಲ್ಲಿ ಪ್ರಮುಖ ಆಕರ್ಷಣೆಯಾಗಿದ್ದು ಸುಮಾರು 72 ಗಂಟೆಗಳ ಕಾಲ ಪಾಪ್ ಗಾಯಕಿ ಶಕೀರಾ ನೀಡಿದ ಕಾರ್ಯಕ್ರಮವಂತೆ. [ಓದಿ: ಜೂನಿಯರ್ ಎನ್ಟಿಆರ್ ಮದುವೆ; ಮಂಟಪಕ್ಕೇ ರು.18 ಕೋಟಿ!]
ಭಾರತೀಯ ಮದುವೆಯಲ್ಲಿ ಅಂತರ್ ರಾಷ್ಟ್ರೀಯ ಖ್ಯಾತಿಯ ಕಲಾವಿದರು ಕಾರ್ಯಕ್ರಮ ನೀಡುವುದು ಇದೇ ಮೊದಲಲ್ಲ. ಕಳೆದ ಮಾರ್ಚ್ ನಲ್ಲಿ ಕಾಜಲ್ ಫಾಬಿಯಾನಿ ಮತ್ತು ಗೌರವ್ ಮದುವೆಗೆ ಪಾಪ್ ಗಾಯಕ ಅಕಾನ್ ಕಾರ್ಯಕ್ರಮ ನೀಡಿದ್ದರು. ಶಾರೂಕ್ ಖಾನ್ ಮತ್ತು ಮಲೈಕಾ ಅರೋರಾ ಮದುವೆ ಕೂಡ ತುಂಬಾ ಗ್ರಾಂಡಾಗಿಯೇ ನಡೆದಿತ್ತು. ಕಾಂಗ್ರೆಸ್ ನಾಯಕ ಕನ್ವರ್ ಸಿಂಗ್ ತನ್ವರ್ ಮಗನ ಮದುವೆ ಕೂಡ ಐಷಾರಾಮಿ ಮದುವೆಗೆ ಇನ್ನೊಂದು ಉದಾಹರಣೆ.
ಭಾರತದ ಇತಿಹಾಸದಲ್ಲಿ ದಾಖಲಾಗಿರುವ ಅದ್ದೂರಿ ಮದುವೆಯಲ್ಲಿ ಮಿತ್ತಲ್ ಕುಟುಂಬ ಎತ್ತರದಲ್ಲಿದೆ. ಲಕ್ಷ್ಮಿ ನಿವಾಸ್ ಮಿತ್ತಲ್ ಮಗಳಾದ ವನಿಶಾ ಮಿತ್ತಲ್ ಮಗಳ ಮದುವೆ ಫ್ರಾನ್ಸ್ ನಲ್ಲಿ ಸುಮಾರು 6 ದಿನಗಳ ಕಾಲ ವೈಭವದಿಂದ ನಡೆಯಿತು. ಈ ಮದುವೆಗೆ ಅಂದಾಜು 200 ಕೋಟಿ ರೂಪಾಯಿ ಖರ್ಚಾಗಿದೆಯಂತೆ. ಬಾಲಿವುಡ್ ನಟ ನಟಿಯರು ಈ ಮದುವೆಯಲ್ಲಿ ಹಲವು ಕಾರ್ಯಕ್ರಮಗಳನ್ನು ನೀಡಿ ಅತಿಥಿಗಳನ್ನು ರಂಜಿಸಿದರಂತೆ. ಇತ್ತೀಚೆಗೆ ನಡೆದ ಸುಬಾರ್ಟೊ ರಾಯ್ ಅವರ ಮಗನ ಮದುವೆಗೆ ಸುಮಾರು 11 ಸಾವಿರ ಅತಿಥಿಗಳು ಆಗಮಿಸಿದ್ದರು. ಖರ್ಚು ಎಷ್ಟು ಕೋಟಿಯಾಗಿದೆಯೆಂದು ಸದ್ಯ ಲೆಕ್ಕ ಸಿಕ್ಕಿಲ್ಲ.
ದೇಶದ ಕ್ರಿಕೆಟ್ ಮತ್ತು ಸಿನಿಮಾ ತಾರೆಯರ ಮದುವೆ ಕೂಡ ಅದ್ದೂರಿಯಾಗಿಯೇ ನಡೆದಿದೆ. ಹೃತೀಕ್ ರೋಷನ್ ತನ್ನ ಸ್ವೀಟ್ ಹಾರ್ಟ್ ಸುಸಾನೆಯನ್ನು ಬೆಂಗಳೂರಿನ ಗೋಲ್ಡನ್ ಪಾಲ್ಮ್ ರೆಸಾರ್ಟ್ ಆಂಡ್ ಸ್ಪಾದಲ್ಲಿ ಮದುವೆಯಾಗಿದ್ದರು. ನಟಿ ಕರಿಷ್ಮಾ ಕಪೂರ್ ಮತ್ತು ಉದ್ಯಮಿ ಸಂಜಯ್ ಕಪೂರ್, ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ, ಸುನಿಲ್ ಗವಾಸ್ಕರ್ ಮಗ ರೋಹನ್ ಗವಾಸ್ಕರ್ ಮದುವೆಗಳಿಗೂ ಕೂಡ ಹಲವು ಕೋಟಿ ರೂಪಾಯಿ ಖರ್ಚು ಮಾಡಲಾಗಿತ್ತು.
ಅಜಯ್ ಜಡೇಜಾ ಮತ್ತು ಅದಿತ ಜೆಟ್ಲಿ ಮದುವೆ, ಅಂಜಲಿ ಮೆಹ್ಲಾ ಮತ್ತು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಮದುವೆ ಭಾರತದಲ್ಲಿ ನಡೆದ ಕೆಲವು ಅದ್ದೂರಿ ಮದುವೆಗಳಾಗಿವೆ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications