ಮುಂದುವರಿದ 'ಮೇರು' ಮುಷ್ಕರ: ಸೋಮವಾರ ಮಾತುಕತೆ

ಮೇರು ಚಾಲಕರ ವಿರುದ್ಧ ಸುಮಾರು 20 ಕೇಸುಗಳು ದಾಖಲಾಗಿವೆ. ದೈನಂದಿನ ಕೆಲಸವಿಲ್ಲದೆ ಬಹಳಷ್ಟು ಚಾಲಕರೂ ಹೈರಾಣಗೊಂಡಿದ್ದಾರೆ. ಈ ಮಧ್ಯೆ, ಪ್ರಯಾಣಿಕರ ಸುರಕ್ಷತೆಯ ನೆಪವೊಡ್ಡಿ ಮೇರು ಕ್ಯಾಬ್ಸ್ ಸಂಸ್ಥೆ ಸೇವೆಯನ್ನು ಸ್ಥಗಿತಗೊಳಿಸಿದೆ. ಚಾಲಕರು ಸಮಾಜಘಾತುಕ ಕೃತ್ಯಗಳಲ್ಲಿ ತೊಡಗಿದ್ದಾರೆ. ಪ್ರಯಾಣಿಕರು, ಚಾಲಕರು ಮತ್ತು ಸಂಸ್ಥೆಯ ಸುರಕ್ಷತೆ ಖಾತರಿಪಡಿಸಿಕೊಂಡ ನಂತರವಷ್ಟೇ ಸೇವೆ ಪುನರಾರಂಭಿಸುವುದಾಗಿ ಸಂಸ್ಥೆಯ ಉಪಾಧ್ಯಕ್ಷ ಗೇವಿನ್ ಡಿ ಅಬ್ರೆವೊ ಹೇಳಿದ್ದಾರೆ.
ಮೇರು ಕ್ಯಾಬ್ಸ್ ಸಂಸ್ಥೆಯು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಕರನ್ನು ಹೊತ್ತೊಯ್ಯುವ ಕೈಂಕರ್ಯದಲ್ಲಿ ತೊಡಗಿದೆ. ಆದರೆ ಕಳೆದ ಬುಧವಾರದಿಂದ ಸಂಸ್ಥೆಯು ಚಾಲಕರು ನಾನಾ ಬೇಡಿಕೆಗಳನ್ನು ಮುಂದಿಟ್ಟು ಮುಷ್ಕರದಲ್ಲಿ ತೊಡಗಿದ್ದಾರೆ. ಕಳೆದ ಬುಧವಾರ ಒಂದು ಕ್ಯಾಬ್ ಅನ್ನು ಸಂಪೂರ್ಣವಾಗಿ ಸುಟ್ಟುಹಾಕುವ ಮೂಲಕ ಹಿಂಸಾಚಾರಕ್ಕಿಳಿದು, ಆಕ್ರೋಶ ವ್ಯಕ್ತಪಡಿಸಿರುವ ಚಾಲಕರು ಸಂಸ್ಥೆಗೆ ಸೇರಿದ 20ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಜಖಂಗೊಳಿಸಿದ್ದಾರೆ. ಸಂಸ್ಥೆಯ ಕ್ಯಾಬ್ ಗಳ ಗಾಜುಗಳು ಮತ್ತು ಕಚೇರಿಯ ಗಾಜುಗಳನ್ನು ಪುಡಿ ಪುಡಿ ಮಾಡಿದ್ದಾರೆ.
ಕಳೆದ ಮೂರು ವರ್ಷಗಳಿಂದ ಪ್ರಯಾಣ ದರ ಹೆಚ್ಚಿಸಿಲ್ಲ. ಆದ್ದರಿಂದ ದರ ಏರಿಸಬೇಕು ಮತ್ತು ನೋಂದಾವಣೆ ದರವನ್ನು ತಗ್ಗಿಸಬೇಕು ಎಂಬುದು ಚಾಲಕರ ಪ್ರಮುಖ ಬೇಡಿಕೆಯಾಗಿದೆ.












Click it and Unblock the Notifications