ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಡಿಮಠದ ಭವಿಷ್ಯ ಮತ್ತು ಬಾಬಾ ಸಾವು

By Srinath
|
Google Oneindia Kannada News

kodi Matt seer Shivananda
ಹಾಸನ, ಏ. 25: ದೇವಮಾನವ ಶ್ರೀ ಸತ್ಯ ಸಾಯಿಬಾಬಾ ಅವರು ದೈವಾದೀನರಾಗುವುದರೊಂದಿಗೆ ಧಾರ್ಮಿಕ ಗುರು ಒಬ್ಬರು ಅಸ್ತಂಗತರಾಗಲಿದ್ದಾರೆ ಎಂದು ಮೊನ್ನೆ ಏಪ್ರಿಲ್ 11ರಂದು ತಾವು ನುಡಿದಿದ್ದ ಭವಿಷ್ಯವೊಂದು ನಿಜವಾಗಿದೆ ಎಂದು ಹಾಸನ ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಪ್ರತಿಕ್ರಿಯಿಸಿದ್ದಾರೆ.

ಭೂಮಿಯ ಮೇಲೆ ಪ್ರತಿಯೊಬ್ಬರ ಸಾವೂ ಶತಸಿದ್ಧ. ಸಾಯಿಬಾಬಾ ಅವರ ಸಾವಿನಿಂದ ಭಕ್ತವೃಂದಕ್ಕೆ ಅಪಾರ ನೋವುಂಟಾಗಿದೆ. ಅವರ ಅಂತ್ಯಸಂಸ್ಕಾರಕ್ಕೆ ಭಕ್ತರು ಶಾಂತಿಯಿಂದ ಸಹಕರಿಸಬೇಕು ಎಂದು ಅವರು ಹೇಳಿದ್ದಾರೆ.

ರಾಜ್ಯದಲ್ಲಿ ಅಕಾಲಿಕ ಮಳೆ ಸುರಿಯುತ್ತಿರುವುದು ಕೆಡುಕಿನ ಸಂಕೇತ. ಉತ್ತರ ಕರ್ನಾಟಕ ಭಾಗದಲ್ಲಿ ಈ ಬಾರಿ ಮತ್ತೊಮ್ಮೆ ಜಲಪ್ರಳಯ ಸಂಭವಿಸಲಿದೆ. ಅಶ್ವಿನಿ ಮಳೆಯಾಗಿರುವುದು ಅರಸನಿಗೆ ಕೇಡು ಬರುವುದರ ಸೂಚಕ. ರಾಜ್ಯದಲ್ಲಿ ಶೀಘ್ರವೇ ಮಹತ್ತರ ರಾಜಕೀಯ ಬದಲಾವಣೆಯಾಗಲಿದೆ ಎಂದು ಅವರು ಪುನರುಚ್ಚರಿಸಿದ್ದಾರೆ.

ಏನು ಹೇಳಿದ್ದರೆಂದರೆ.... ಕೋಡಿ ಮಠದ ಸ್ವಾಮೀಜಿ ಅವರು ಅಂದು (ಏ.11) ರಾಯಚೂರಿನಲ್ಲಿ ಮಾತನಾಡುತ್ತಾ, ವಿಶ್ವದಲ್ಲಿ ವಾಯು ಪ್ರಳಯವಾಗುತ್ತದೆ. ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಮುಂದುವರಿಯಲಿದೆ. 2009ರಲ್ಲಿ ಸಂಭವಿಸಿದ ಅತಿವೃಷ್ಟಿಯಿಂದ ಇಡೀ ಉತ್ತರ ಕರ್ನಾಟಕ ತತ್ತರಿಸಿತ್ತು. ಅದೇ ರೀತಿಯ ಮತ್ತೊಂದು ಕಂಟಕ ಉತ್ತರ ಕರ್ನಾಟಕಕ್ಕೆ ಕಾದಿದೆ ಎಂದಿದ್ದರು.

ದೈವತ್ವಕ್ಕೀಡಾದ ಧಾರ್ಮಿಕ ಗುರು ಒಬ್ಬರು ಅಸ್ತಂಗತರಾಗಲಿದ್ದಾರೆ. ಅವರ ಸಾವಿನಿಂದ ಜನತೆ ಅಪಾರ ನೋವಿಗೆ ಈಡಾಗುತ್ತಾರೆ. ಕಾರ್ತೀಕ ಮಾಸದಲ್ಲಿ ರಾಜಕೀಯ ಪಕ್ಷವೊಂದು ಅವನತಿ ಹಾದಿ ಹಿಡಿಯುತ್ತದೆ. ತುಂಗಾ ನದಿ ಉಕ್ಕಿ ಹರಿಯುತ್ತದೆ. ಅಪಾರ ಪ್ರಮಾಣದ ಆಸ್ತಿ ಪಾಸ್ತಿ ನಷ್ಟವಾಗುತ್ತದೆ ಎಂದು ಸ್ವಾಮೀಜಿಗಳು ಹೇಳಿದ್ದರು.

English summary
With the death of Puttaparthi Saibaba it seems the Kodi Matt prediction has spelt right. On April 11 the Matt seer Shivananda Shivyogi Rajendra had said that a Spiritual Leader will die this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X