Get Updates
Get notified of breaking news, exclusive insights, and must-see stories!

ಏ.2ರಂದು ಮುಂಬೈನಲ್ಲಿ ರಜೆ ಏಕೆ ಗೊತ್ತಾ?

ಮುಂಬೈ, ಏ.1: ಶನಿವಾರ ಏಪ್ರಿಲ್ 2 ರಂದು ಎಲ್ಲಾ ಸರ್ಕಾರಿ ಮತ್ತು ಅರೆ ಸರ್ಕಾರಿ ಕಚೇರಿಗಳಿಗೆ ಮಹಾರಾಷ್ಟ್ರ ಸರ್ಕಾರ ರಜೆ ನೀಡಿದೆ. ವಾಂಖೆಡೆ ಕ್ರೀಡಾಂಗಣದಲ್ಲಿ ವಿಶ್ವಕಪ್ 2011ರ ಅಂತಿಮ ಹಣಾಹಣಿಯಲ್ಲಿ ಭಾರತ ಹಾಗೂ ಶ್ರೀಲಂಕಾ ಸೆಣಸಾಟಕ್ಕೆ ಪೂರ್ವ ಸಿದ್ಧತೆಯಲ್ಲಿರುವ ಮುಂಬೈ ನಗರ ಪೊಲೀಸ್, ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಬಾಂಬ್ ಸ್ಫೋಟ, ಉಗ್ರರ ದಾಳಿ ಭೀತಿ ಇರುವ ಹಿನ್ನೆಲೆಯಲ್ಲಿ ಪಂದ್ಯ ನಡೆಯುವ ಸಂದರ್ಭದಲ್ಲಿ ಸಾರ್ವಜನಿಕರು ಆದಷ್ಟು ತಮ್ಮ ತಮ್ಮ ಮನೆಗಳಲ್ಲೇ ಕ್ರಿಕೆಟ್ ವೀಕ್ಷಿಸಿ ಆನಂದಿಸಬೇಕು ಎಂದು ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.

ಶಾಲಾ, ಕಾಲೇಜುಗಳಿಗೆ ಅರ್ಧದಿನ ರಜೆ ಇರುವುದರಿಂದ ಮ್ಯಾಚ್ ನಡೆಯುವ ಸಮಯಕ್ಕೆ ಕ್ರೀಡಾಂಗಣದ ಸಮೀಪ ಜನಜಂಗುಳಿ ತಪ್ಪಿಸಬಹುದು.ದಕ್ಷಿಣ ಮುಂಬೈನ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಯಾವುದೇ ಅಹಿತಕರ ಘಟನೆ ನಡೆದರೂ ಅದರ ಪರಿಣಾಮವನ್ನು ತಕ್ಷಣಕ್ಕೆ ಶಮನಗಳಿಸಲು ಆದಷ್ಟು ಜನರನ್ನು ಮನೆಯಲ್ಲೇ ಇರುವಂತೆ ಸೂಚಿಸಲಾಗಿದೆ. ಬಲ್ಕ್ ಎಸ್ ಎಂಎಸ್ ಸಂದೇಶಗಳನ್ನು ಎರಡು ದಿನಗಳ ಕಾಲ ನಿಷೇಧಿಸಲಾಗಿದೆ ಎಂದು ಪೊಲೀಸ್ ವಕ್ತಾರ ರಾಜ್ ಕುಮಾರ್ ಹೇಳಿದ್ದಾರೆ. [ಗ್ಯಾಲರಿ: ಟಾಪ್ ಬ್ಯಾಟ್ಸ್ ಮನ್| ಟಾಪ್ ಬೌಲರ್

ವಿವಿಧ ಹಂತದ ಸುರಕ್ಷತೆ:
ಮೂರು ವಲಯಗಳ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. ಸುಮಾರು 3 ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳನ್ನು ಆಯೋಜಿಸಲಾಗಿದೆ. ಕೇಂದ್ರ ಕೈಗಾರಿಕಾ ಭದ್ರತಾ ಪಡೆ(CREF), ರಾಜ್ಯ ಮೀಸಲು ಪಡೆ(SREF) ಹಾಗೂ ಕ್ಷಿಪ್ರ ಕಾರ್ಯಪಡೆ(RAF) ಗಳನ್ನು ಬಳಸಿಕೊಳ್ಳಲಾಗುತ್ತಿದೆ. ವಾಂಖೆಡೆ ಕ್ರೀಡಾಂಗಣದ ಸುತ್ತಾ 260ಕ್ಕೂ ಹೆಚ್ಚು ಸಿಸಿಟಿವಿ ಕೆಮೆರಾಗಳನ್ನು ಅಳವಡಿಸಲಾಗಿದೆ. ಇದರ ಜೊತೆಗೆ ಶಸ್ತ್ರಧಾರಿ ಎನ್ ಎಸ್ ಜಿ ಕಮಾಂಡೋಗಳು, ಬಾಂಬ್ ನಿರೋಧಕ ದಳ, ಶ್ವಾನದಳ, ಅಗ್ನಿಶಾಮಕದಳ ಸೇರಿದಂತೆ ಹಲವು ಪಡೆಗಳ ಸೇವೆಯನ್ನು ಮುಂಬೈ ಪೊಲೀಸ್ ಪಡೆಯುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+