ಯಾರಿಗೆ ಬೇಕು ಮೊಹಾಲಿ ಪಂದ್ಯದ ಟಿಕೆಟ್?
ಮೊಹಾಲಿ, ಮಾ. 27: ವಿಶ್ವಕಪ್ 2011 ಎರಡನೇ ಸೆಮಿಫೈನಲ್ ಪಂದ್ಯಕ್ಕೆ ಟಿಕೆಟ್ ಸಿಗದೆ ಭಾರತ ಹಾಗೂ ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಗಳು ಕಂಗಾಲಾಗಿದ್ದಾರೆ. ಟೆಕೆಟ್ ಸೋಲ್ಡ್ ಔಟ್ ಬೋರ್ಡ್ ನೇತು ಹಾಕಿರುವ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ಸ್ ಸುಮ್ಮನೆ ಕೂತಿದೆ. ಈ ನಡುವೆ ಕಾಳಸಂತೆಗೆ ಟಿಕೆಟ್ ನ ಮೂಲ ಬೆಲೆಯ ಐದು ಪಟ್ಟು ಹಣಕ್ಕೆ ಟಿಕೆಟ್ ಗಳು ಮಾರಾಟವಗುತ್ತಿದೆ. 1 ಲಕ್ಷ ರು ಬೆಲೆಗೂ ಟಿಕೆಟ್ ಮಾರಾಟವಗಿರುವ ವರದಿ ಬಂದಿದೆ.
ಸುಮಾರು 27,500 ಜನರಿಗೆ ಸ್ಥಳಾವಕಾಶ ಒದಗಿಸುತ್ತಿರುವ ಪಿಸಿಎ, ಮಾ.21 ಹಾಗೂ 22ರಂದು ಎಲ್ಲಾ 15,000 ಟಿಕೆಟ್ ಗಳನ್ನು ಮಾರಾಟ ಮಾಡಿದೆ. ಇನ್ನು ಕ್ರಿಕೆಟ್ ಕ್ಲಬ್, ಸ್ಥಳೀಯ ರಾಜಕಾರಣಿಗಳು ಸೇರಿದಂತೆ ಪ್ರಭಾವಿ ನಾಯಕರಿಗೆ ಉಳಿದ ಟಿಕೆಟ್ ಗಳು ಹಂಚಿಹೋಗಿದೆ. ಪಾಕಿಸ್ತಾನದಿಂದ ಕೂಡಾ ಟಿಕೆಟ್ ಗ್ ಭಾರಿ ಬೇಡಿಕೆ ಬಂದಿದೆ. ಸುಮಾರು 50 ಟಿಕೆಟ್ ಗಳು ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ನೀಡಲಾಗಿದೆ. ಸುಮಾರು 200 ಜನ ಅಭಿಮಾನಿಗಳು ಪಾಕಿಸ್ತಾನದಿಂದ ಅಧಿಕೃತ ಬರುವ ಸೂಚನೆ ಸಿಕ್ಕಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ರಿಲೆಯನ್ಸ್ ಅಧ್ಯಕ್ಷ ಮುಖೇಶ್ ಅಂಬಾನಿ ಕೂಡಾ ಪಂದ್ಯ ವೀಕ್ಷಣೆಗೆ ಆಗಮಿಸುವ ನಿರೀಕ್ಷೆಯಿದೆ.
ಬ್ಲ್ಯಾಕ್ ಮಾರುಕಟ್ಟೆ: ಹೇಗಾದರೂ ಟಿಕೆಟ್ ಪಡೆದು ಪಂದ್ಯ ನೋಡಬೇಕೆಂಬ ಹಂಬಲದಿಂದ ಅಭಿಮಾನಿಗಳು ಕಾಳಸಂತೆಯಲ್ಲಿ ಕೇಳಿದ ಮೊತ್ತ ನೀಡಿ ಟಿಕೆಟ್ ಪಡೆಯುತ್ತಿದ್ದಾರೆ. 300 ರು ಬೆಲೆ ಟಿಕೆಟ್ ಸಾವಿರ ರು.ಗೆ ಹಾಗೂ 3 ಸಾವಿರ ರು ಬೆಲೆ ಟಿಕೆಟ್ 10 ಸಾವಿರಕ್ಕೆ ಮಾರಾಟವಾಗುತ್ತಿದೆ. 15,000 ರು ಬೆಲೆ ಟಿಕೆಟ್ 1 ಲಕ್ಷ ರು ತನಕ ಬೇಡಿಕೆ ಇದೆ. ಕಾಳಸಂತೆಯಲ್ಲಿ ಟಿಕೆಟ್ ಗಳು ಬಿಕರಿಯಾಗುತ್ತಿರುವುದರಿಂದ ಸ್ಥಳೀಯ ಕ್ರಿಕೆಟ್ ಅಭಿಮಾನಿಗಳಿಗೆ ಭಾರಿ ನಿರಾಶೆಯಾಗಿದೆ. ಗೊತ್ತಿರುವ ಕ್ರಿಕೆಟ್ ಕ್ಲಬ್, ಮಾಧ್ಯಮ ಮಿತ್ರರು, ಪೊಲೀಸ್ ಇಲಾಖೆ ಗೆಳೆಯರಿಗೆ ಅಭಿಮಾನಿಗಳು ನಿತ್ಯ ಕರೆ ಮಾಡಿ ಟಿಕೆಟ್ ಅಥವಾ ಪಾಸ್ ಕೊಡಿಸುವಂತೆ ದುಂಬಾಲು ಬಿದ್ದಿದ್ದಾರೆ.
-
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
ಕರ್ನಾಟಕ PGCET 2026 ಅಧಿಸೂಚನೆ ಪ್ರಕಟ: ಎಂಬಿಎ ಸೇರಿ ವಿವಿಧ ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಮಾರ್ಚ್ 23 ರಿಂದ ಅರ್ಜಿ ಆಹ್ವಾನ -
ವಿಶ್ವಮಾತೆ ಎನ್ನುತ್ತಾ ಶ್ರೀಚಾಮುಂಡೇಶ್ವರಿಯ ಕನ್ನಡ ಹಾಡು ಹಂಚಿಕೊಂಡ ಪ್ರಧಾನಿ ಮೋದಿ -
ಮಾರ್ಚ್ 21ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ












Click it and Unblock the Notifications