ಅರ್ಥ್ ಅವರ್ : ಮಾ.26, 1 ಗಂಟೆ ದೀಪ ಆರಿಸಿ
ಬೆಂಗಳೂರು,
ಮಾ. 18: ಅರ್ಥ್ ಅವರ್ ಎಂಬ ಅರ್ಥಪೂರ್ಣ ಚಳವಳಿ ಮತ್ತೆ ಬಂದಿದೆ. ಜಾಗತಿಕ ತಾಪಮಾನ ಹಾಗೂ ವೀಪರೀತವಾಗಿ ಬದಲಾಗುತ್ತಿರುವ ಹವಾಮಾನದಿಂದಾಗಿ ಉಂಟಾಗುತ್ತಿರುವ ಅನಾಹುತಗಳನ್ನು ತಡೆಗಟ್ಟಲು ವರ್ಲ್ಡ್ ವೈಲ್ಡ್ ಲೈಫ್ ಫಂಡ್ ಈ ಅಭಿಯಾನವನ್ನು ಹಮ್ಮಿಕೊಂಡಿದೆ. ವಿಶ್ವದಾದ್ಯಂತ ನಡೆಯುವ ಈ ಸಾಂಕೇತಿಕ ಪ್ರತಿಭಟನೆಯಲ್ಲಿ ಸುಮಾರು 150ಕ್ಕೂ ಹೆಚ್ಚು ದೇಶಗಳು ಪಾಲ್ಗೊಳ್ಳುತ್ತಿವೆ. ಭಾರತ ಈ ಬಾರಿ ಮಾ. 26ರಂದು ರಾತ್ರಿ 8.30 ನಿಮಿಷಕ್ಕೆ ಅರ್ಥ್ ಅವರ್ ಆರಂಭವಾಗಲಿದೆ. id="toptextpromo">ಅನೇಕ
ನಗರ ಪಾಲಿಕೆ, ಕಚೇರಿ, ವಾಣಿಜ್ಯ ಮಳಿಗೆಗಳು ಈ ಚಳವಳಿಯಲ್ಲಿ ಪಾಲ್ಗೊಳ್ಳುತ್ತಿವೆ. ಸಿಡ್ನಿಯಲ್ಲಿ 2007ರಲ್ಲಿ ಆರಂಭವಾದ ಈ ಚಳವಳಿಗೆ ಭಾರತದಲ್ಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಸತತವಾಗಿ ಮೂರನೇ ವರ್ಷ ಭಾರತದಲ್ಲಿ ಈ ಚಳವಳಿ ನಡೆಯಲಿದೆ. ಅರ್ಥ್ ಅವರ್ ಕೇವಲ ಒಂದು ಗಂಟೆ ವಿದ್ಯುತ್ ದೀಪ ಆರಿಸುವ ಕ್ರಿಯೆಯಾಗದೆ, ಜಾಗತಿಕ ತಾಪಮಾನ ಹೆಚ್ಚಳವನ್ನು ತಗ್ಗಿಸಲು ಪ್ರತಿ ದಿನ ಪ್ರಯತ್ನ ಪಡೆಬೇಕಾಗಿದೆ ಎಂದು ಡಬ್ಲ್ಯೂಡಬ್ಲ್ಯೂಎಫ್ ನ ಸಿಇಒ ರವಿ ಸಿಂಗ್ ಹೇಳುತ್ತಾರೆ. [ಹೆಚ್ಚಿನ ಮಾಹಿತಿಗೆ:
ಆರ್ಥ್
ಅವರ್
ವೆಬ್
ತಾಣ
ಅಥವಾ
WWF
ವೆಬ್
ತಾಣ
ನೋಡಿ]
id='are-slot-1'
class='oiad
oi-axt
oiadv'>
id='top-searched-articles'>
ನಟ
ಅಮೀರ್ ಖಾನ್, ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಇನ್ಫಿಯ ಮೋಹನದಾಸ್ ಪೈ ಮುಂತಾದವರು ಈ ಚಳವಳಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಎಸ್ಟೀಮ್ ಮಾಲ್, ಬ್ರಿಗೇಡ್ ರಸ್ತೆಯ ಮಳಿಗೆಗಳು ಕೆಲವು ಅಪಾರ್ಟ್ಮೆಂಟ್ ಗಳಲ್ಲಿ ಅರ್ಥ್ ಅವರ್ ಅನ್ನು ಆಚರಿಸಿಕೊಂಡು ಬರಲಾಗಿದೆ. ಕೆನೆರಾ ಬ್ಯಾಂಕ್, ಎಚ್ ಎಸ್ ಬಿಸಿ, ರಿಲೆಯನ್ಸ್ ಪವರ್, ಐಸಿಐಸಿಐ ಬ್ಯಾಂಕ್, ಐಎನ್ ಜಿ ವೈಶ್ಯಾ ಬ್ಯಾಂಕ್ ಗಳು, ಕೆನಾನ್, ಐಟಿಸಿ ವೆಲ್ ಕಮ್ ಸಮೂಹದ ಹೋಟೆಲ್ ಗಳು, ಟಾಟ ಮೋಟರ್ಸ್, ತಾಜ್ ಹೋಟೆಲ್, ಮುಂಬೈನ ಪ್ರಮುಖ ವಿವಿಗಳು, ಶಿವಾಜಿ ಟರ್ಮಿನಸ್, ಶಾಪಿಂಗ್ ಮಾಲ್ ಗಳಲ್ಲಿ ಅರ್ಥ್ ಅವರ್ ಆಚರಿಸಲಾಗುತ್ತಿದೆ. 2010ರಲ್ಲಿ ಭಾರತದ 50 ಲಕ್ಷಕ್ಕೂ ಅಧಿಕ ಜನ ಈ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು.











Click it and Unblock the Notifications