ಮಂಗಳದಿಂದ ವಿಕಿರಣ: ಮೊಬೈಲ್ ಆಫ್ ಮಂಗಾಟ

ನಾಸಾ ಆಗಲಿ, ಬಿಬಿಸಿಯಾಗಲಿ ಈ ರೀತಿಯ ಸಂದೇಶವನ್ನು ಇದುವರೆವಿಗೂ ಕಳಿಸಿಲ್ಲ. ನಾಸಾ ಹಾಗೂ ಬಿಬಿಸಿ ವೆಬ್ ತಾಣದಲ್ಲಿ ಯಾವುದೇ ಎಚ್ಚರಿಕೆ ಸಂದೇಶ ನೀಡಿಲ್ಲ. ಮೇಲಾಗಿ ಮಂಗಳ ಒಂದು ಗ್ರಹವಾಗಿಲ್ಲ. ಗ್ರಹದಿಂದ ಯಾವುದೇ ವಿಕಿರಣಗಳಿ ಹೊರಹೊಮ್ಮುವುದಿಲ್ಲ. ಸೂರ್ಯ ಅಥವಾ ಯಾವುದೆ ನಕ್ಷತ್ರಗಳಿಂದ ವಿಕಿರಣಗಳು ಭೂಮಿಗೆ ತಲುಪುವ ಸಾಧ್ಯತೆಯಿದೆ. ಆದರೆ, ಅದೂ ಕೂಡಾ ಭೂಮಿಯ ಹೊರ ಮೇಲ್ಮೈ ದಾಡಿ ನಿಮ್ಮ ಮೊಬೈಲ್ ಗೆ ತಲುಪುವಷ್ಟರಲ್ಲಿ ಜೀವ ಕಳೆದುಕೊಂಡಿರುತ್ತದೆ.
ಯಾವುದೇ ವಿಕಿರಣ ಒಂದು ವೇಳೆ ಭೂಮಿಯನ್ನು ತಲುಪಿದರೂ, ಸಂವಹನ ಕ್ರಿಯೆಗೆ ಮೊಬೈಲ್ ಕಮ್ಯೂನಿಕೇಷನ್ ಗೆ ತೊಂದರೆ ಪಡಿಸುವಷ್ಟು ಮಾರಕವಾಗಿರುವುದಿಲ್ಲ. ಹಾಗಾಗಿ ಗ್ರಾಹಕರು ಧೈರ್ಯವಾಗಿ ಇಂದು ರಾತ್ರಿ 12 ರಿಂದ 3 ಗಂಟೆ ವೇಳೆಗೆ ಅಥವಾ ನಾಳೆ ಅಥವಾ ಎಂದೆಂದಿಗೂ ಯಾವುದೇ ಭಯವಿಲ್ಲದೆ ಮೊಬೈಲ್ ಫೋನ್ ಬಳಸಬಹುದು. ಸೂರ್ಯನಿಂದ ಬರುವ ಇನ್ಫ್ರಾರೆಡ್, ಅಲ್ಟ್ರಾ ವೈಲೇಟ್ ಕಿರಣಗಳು, ಗ್ಯಾಮಾ, ಎಕ್ಸ್ ರೇಗಳು ಬೇಕಾದರೆ ಮನುಷ್ಯರಿಗೆ ತಕ್ಕಮಟ್ಟಿಗೆ ಹಾನಿಕಾರಕ ಎಂದರೆ ನಂಬಬಹುದು. ಆದರೆ, ಮಂಗಳದಿಂದ ಹಾನಿಕಾರಕ ಕಿರಣ ಅದು ಮೊಬೈಲ್ ಗೆ ಹಾನಿ ಎಂದರೆ ನಿದ್ದೆಗಣ್ಣಿನಲ್ಲಿದ್ದರೂ ನಂಬುವಂಥ ವಿಷಯವಲ್ಲ.
ಈ ರೀತಿ ಸುಳ್ಳು ಸಂದೇಶ ಸುಮಾರು 2 ಮೂರು ವರ್ಷಗಳಿಂದ ಹರಿದಾಡುತ್ತಿದೆ. ಸಾಮಾನ್ಯ ಜ್ಞಾನ ಇದ್ದವರು ಮೊದಲಿಗೆ ಈ ರೀತಿ ಸಂದೇಶಗಳ ಸತ್ಯಾಸತ್ಯತೆ ಬಗ್ಗೆ ಅರಿಯದೆ ಸುಮ್ಮನೆ ಇನ್ನೊಬ್ಬರಿಗೆ ಮೇಸೇಜ್ ಫಾರ್ವಡ್ ಮಾಡುತ್ತಾರೆ. ಜನ ಸುಮ್ಮನೆ ಭಯ ಭೀತರಾಗುತ್ತಾರೆ. ನಮ್ಮ ಓಜೋನ್ ಪದರ ಕಾಸ್ಮಿಕ್ ಕಿರಣಗಳನ್ನು ತಡೆಯುವಷ್ಟು ಸಾಮರ್ಥ್ಯ ಹೊಂದಿದೆ. ಗ್ರಹಗಳಿಗೆ ಹೊಳೆಯುವ ಗುಣವಿಲ್ಲ. ಸೂರ್ಯನ ಬೆಳಕನ್ನು ಪ್ರತಿಫಲಿಸುತ್ತವೆ. ನಕ್ಷತ್ರಗಳು ಮಾತ್ರ ಹೊಳೆಯುತ್ತವೆ ಎಂಬ ಸಾಮಾನ್ಯ ವಿಜ್ಞಾನದ ವಿದ್ಯಾರ್ಥಿಗೆ ಇರುವ ತಿಳುವಳಿಕೆ ನೆಟಿಜನ್ಸ್, ಗಿಜ್ಮೋಫ್ರಿಕ್ ಯುವಕರಿಗೆ ಇದ್ದರೆ ಒಳಿತು ಎಂದು ಬೆಂಗಳೂರಿನ ನೆಹರೂ ತಾರಾಲಯದ ವಿಜ್ಞಾನಿ ಬಿಎಸ್ ಶೈಲಜಾ ಅವರು ಹೇಳಿದ್ದಾರೆ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications