ಪುರಿ ಮಠದಲ್ಲಿ 18 ಟನ್ ಬೆಳ್ಳಿ ಗಟ್ಟಿ ಪತ್ತೆ

ಬೆಳ್ಳಿ ಗಟ್ಟಿ ಗುಟ್ಟು: ಎಮಾರು ಮಠದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಬೆಳ್ಳಿ ಗಟ್ಟಿ ಇರುವ ವಿಷಯ ಮಠದ ಸಿಬ್ಬಂದಿಗಾಗಲೀ, ಧಾರ್ಮಿಕ ದತ್ತಿ ಇಲಾಖೆಗಾಗಲಿ ಗೊತ್ತೇ ಇರಲಿಲ್ಲ. 200 ವರ್ಷದಷ್ಟು ಹಳೆಯದಾದ ಮಠದ ಮೇಲೆ ಖಚಿತ ಸುಳಿವಿನ ಆಧಾರದಲ್ಲಿ ದಾಳಿ ನಡೆಸಿದಾಗ ಬೆಳ್ಳಿ ಗಟ್ಟಿಗಳು ಬಹಿರಂಗವಾಗಿವೆ. ಬೆಳ್ಳಿ ಗಟ್ಟಿಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ಗಟ್ಟಿ ಗುಟ್ಟು ಬಿಚ್ಚಿಕೊಂಡಿದೆ. ಈ ಬೆಳ್ಳಿ ಗಟ್ಟಿಗಳಲ್ಲಿ ಯುಎಇ, ಜಪಾನ್, ಚೀನಾ, ದುಬೈ ಮುದ್ರೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಒರಿಸ್ಸಾ ಸರಕಾರದ ಪ್ರಾಚ್ಯ ವಸ್ತು ಇಲಾಖೆ ಕೆಲವು ತಿಂಗಳ ಹಿಂದೆ ಮಠದ ದುರಸ್ತಿ ಮತ್ತು ನವೀಕರಣ ಕಾರ್ಯ ಕೈಗೊಂಡಿತ್ತು. ಆಗ ವರುಣ್ ಮತ್ತು ಅಕ್ಷಯ್ ಎಂಬಿಬ್ಬರನ್ನು ದುರಸ್ಥಿ ಕಾರ್ಯಕ್ಕಾಗಿ ಬಳಸಿಕೊಳ್ಳಲಾಗಿತ್ತು. ಕಾಮಗಾರಿ ವೇಳೆ ಈ ಕಾರ್ಮಿಕರಿಬ್ಬರು ಮಠದೊಳಗೆ ಮರದ ಪೆಟ್ಟಿಗೆಯಲ್ಲಿರಿಸಿದ್ದ ಬೆಳ್ಳಿ ಗಟ್ಟಿಗಳನ್ನು ನೋಡಿದ್ದರು. ಗಮನಾರ್ಹವೆಂದರೆ ಈ ಪೆಟ್ಟಿಗೆಗಳಿದ್ದ ಕೊಠಡಿಯನ್ನು ದಶಕಗಳಿಂದ ಮುಚ್ಚಲಾಗಿತ್ತು. ಜಗನ್ನಾಥ ಮಂದಿರ ಆಸುಪಾಸಿನಲ್ಲಿರುವ ಮಠಗಳೆಲ್ಲ ಮಂದಿರದ ಆಸ್ತಿಯಾಗಿವೆ.
ಮಠದಲ್ಲಿ ಈ ಬೆಳ್ಳಿ ಗಟ್ಟಿಗಳು ಇರುವುದು ತಿಳಿದಿರಲಿಲ್ಲ. ಆದರೆ ಮಠದಲ್ಲಿ ಗುಪ್ತಧನ ಇರುವುದಾಗಿ ಪೂರ್ವಾಧಿಕಾರಿ ಮಹಾಂತ ರಾಜಗೋಪಾಲ್ ರಾಮಾನುಜ ದಾಸ್ ಹೇಳುತ್ತಿದ್ದರು ಎಂದು ಮಠದ ಹಾಲಿ ಮೇಲ್ವಿಚಾರಕ ಗದಾಧರ್ ರಾಮಾನುಜ ದಾಸ್ ಪೊಲೀಸರಿಗೆ ತಿಳಿಸಿದ್ದಾರೆ.
More From
-
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
ವಿಶ್ವಗುರು ಬಸವಣ್ಣ ಮತ್ತು ಅಕ್ಕಮಹಾದೇವಿ ಬಗ್ಗೆ ಅವಹೇಳನಕಾರಿ ಪೋಸ್ಟ್: ಆರೋಪಿ ಬಂಧನಕ್ಕೆ ಆಗ್ರಹ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ












Click it and Unblock the Notifications