ಐಐಎಸ್ಸಿ ಚಿತ್ರದುರ್ಗ ಕ್ಯಾಂಪಸ್ ಲೋಕಾರ್ಪಣೆ ಫೆ. 26ಕ್ಕೆ
ಬೆಂಗಳೂರು,
ಫೆ.22: ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ಕುದಾಪುರ ಬಳಿ ವಿನೂತನವಾಗಿ ತಲೆಯೆತ್ತಿರುವ ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಎರಡನೆಯ ಕೇಂದ್ರ ಫೆಬ್ರವರಿ 26ರಂದು ಲೋಕಾರ್ಪಣೆಗೊಳ್ಳಲಿದೆ. ಐಐಎಸ್ಸಿಗೆ ಬೆಂಗಳೂರಿನ ನಂತರ ಇದು ಎರಡನೆಯ ಶಾಖೆಯಾಗಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶನಿವಾರ ಉದ್ಘಾಟಿಸಲಿದ್ದಾರೆ. id="toptextpromo">1909ರಲ್ಲಿ
ಟಾಟಾ ಇನ್ಸ್ಟಿಟ್ಯೂಟ್ ಹೆಸರಿನಿಂದ ಆರಂಭವಾದ ಬೆಂಗಳೂರು ಕೇಂದ್ರ ಕಾಲಾಂತರದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯಾಗಿ ಕಂಗೊಳಿಸಿದೆ. ಬೆಂಗಳೂರಿನಲ್ಲಿ 444 ಎಕರೆ ಪ್ರದೇಶದಲ್ಲಿ ಶತಮಾನದಿಂದ ವಿರಾಜಮಾನವಾಗಿರುವ ಸಂಸ್ಥೆಗೆ ಹೊಸ ಕ್ಯಾಂಪಸ್ ವಿಶೇಷ ಮೈಲುಗಲ್ಲು. ಈ ನೂತನ ಕೇಂದ್ರ 1,500 ಎಕರೆ ಸುವಿಶಾಲ ಪ್ರದೇಶದಲ್ಲಿದೆ. id='are-slot-1' class='oiad oi-axt oiadv'> id='top-searched-articles'>ಸರ್
ಸಿವಿ ರಾಮನ್, ಸಿಎನ್ಆರ್ ರಾವ್, ಎಸ್ ಧವನ್ ಅವರಂತಹ ಖ್ಯಾತ ವಿಜ್ಞಾನಿಗಳು ಐಐಎಸ್ಸಿಯಲ್ಲಿ ಛಾಪು ಮೂಡಿಸಿದ್ದಾರೆ. ಇಂತಹ ನೂರಾರು ವಿಜ್ಞಾನಿಗಳು ಹೊಸ ಕೇಂದ್ರದಲ್ಲಿ ಸಂಶೋಧನೆ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.











Click it and Unblock the Notifications