ಐಐಎಸ್ಸಿ ಚಿತ್ರದುರ್ಗ ಕ್ಯಾಂಪಸ್ ಲೋಕಾರ್ಪಣೆ ಫೆ. 26ಕ್ಕೆ

1909ರಲ್ಲಿ ಟಾಟಾ ಇನ್ಸ್ಟಿಟ್ಯೂಟ್ ಹೆಸರಿನಿಂದ ಆರಂಭವಾದ ಬೆಂಗಳೂರು ಕೇಂದ್ರ ಕಾಲಾಂತರದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯಾಗಿ ಕಂಗೊಳಿಸಿದೆ. ಬೆಂಗಳೂರಿನಲ್ಲಿ 444 ಎಕರೆ ಪ್ರದೇಶದಲ್ಲಿ ಶತಮಾನದಿಂದ ವಿರಾಜಮಾನವಾಗಿರುವ ಸಂಸ್ಥೆಗೆ ಹೊಸ ಕ್ಯಾಂಪಸ್ ವಿಶೇಷ ಮೈಲುಗಲ್ಲು. ಈ ನೂತನ ಕೇಂದ್ರ 1,500 ಎಕರೆ ಸುವಿಶಾಲ ಪ್ರದೇಶದಲ್ಲಿದೆ.
ಸರ್ ಸಿವಿ ರಾಮನ್, ಸಿಎನ್ಆರ್ ರಾವ್, ಎಸ್ ಧವನ್ ಅವರಂತಹ ಖ್ಯಾತ ವಿಜ್ಞಾನಿಗಳು ಐಐಎಸ್ಸಿಯಲ್ಲಿ ಛಾಪು ಮೂಡಿಸಿದ್ದಾರೆ. ಇಂತಹ ನೂರಾರು ವಿಜ್ಞಾನಿಗಳು ಹೊಸ ಕೇಂದ್ರದಲ್ಲಿ ಸಂಶೋಧನೆ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.












Click it and Unblock the Notifications