ಬಳ್ಳಾರಿ ಜಿಲ್ಲಾಧಿಕಾರಿ ಶಿವಪ್ಪ ದಿಢೀರ್ ವರ್ಗಾವಣೆ

ಬಿ. ಶಿವಪ್ಪ ಅವರು ಅಕ್ಟೋಬರ್ 2011 ರ ಕೊನೆಯಲ್ಲಿ ಸೇವೆಯಿಂದ ನಿವೃತ್ತಿ ಹೊಂದಲಿದ್ದರು. ಇವರು ಸಚಿವ ಬಿ. ಜನಾರ್ದನರೆಡ್ಡಿ ಅವರ ವಿಶ್ವಾಸರ್ಹ ಅಧಿಕಾರಿ ಎಂದೇ ಗುರುತಿಸಿಕೊಂಡಿದ್ದರು. ಆದರೆ, ಸಂಸದೆ ಜೆ. ಶಾಂತ ಅವರ ಆಯ್ಕೆಯ ಹಿನ್ನಲೆಯಲ್ಲಿ ಹೈಕೋರ್ಟ್ನಿಂದ ತೀವ್ರ ತರಾಟೆಗೆ ಗುರಿ ಆಗಿದ್ದರು.
ಇವರು 2 ಬಾರಿ ವರ್ಗ ಆಗಿದ್ದಾಗ ಜಿ. ಜನಾರ್ದನರೆಡ್ಡಿ ಅವರೇ ಪ್ರತಿಷ್ಠೆಯಾಗಿ ಪರಿಗಣಿಗಿಸಿ ವರ್ಗಾವಣೆಯನ್ನು ರದ್ದುಗೊಳಿಸುವಲ್ಲಿ ಯಶಸ್ವಿ ಆಗಿದ್ದರು. ಬಿ. ಶಿವಪ್ಪ ಅವರು ಜುಲೈ 17, 2008 ರಂದು ಬಳ್ಳಾರಿ ಡಿಸಿ ಆಗಿ ಅಧಿಕಾರ ಸ್ವೀಕರಿಸಿದ್ದರು.











Click it and Unblock the Notifications