2ಜಿ ತರಂಗಗುಚ್ಛ ಹಂಚಿಕೆ : ನ್ಯಾ. ಶಿವರಾಜ್ ವರದಿ ಸಲ್ಲಿಕೆ

ಇಂದು ಬೆಳಿಗ್ಗೆ ಮಾಹಿತಿ ತಂತ್ರಜ್ಞಾನ ಮತ್ತು ದೂರಸಂಪರ್ಕ ಸಚಿವ ಕಪಿಲ್ ಸಿಬಲ್ ಅವರಿಗೆ ವರದಿ ಸಲ್ಲಿಸಿರುವ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಅವರು ಸರಕಾರದ ಮಾರ್ಗದರ್ಶಿಯನ್ನು ಪಾಲನೆ ಮಾಡದ ದೂರಸಂಪರ್ಕ ಇಲಾಖೆಯ ಅಧಿಕಾರಿಗಳ ಹೆಸರುಗಳ ಪಟ್ಟಿ ಸಲ್ಲಿಸಿದ್ದಾರೆ. ಈ ವರದಿಯನ್ನು ಕಪಿಲ್ ಸಿಬಲ್ ಅವರು 'ನಿರ್ಭಯ'ದಿಂದ ಕೂಡಿದೆ ಎಂದು ಬಣ್ಣಿಸಿದ್ದಾರೆ.
2ಜಿ ತರಂಗಗುಚ್ಛವನ್ನು ಅನರ್ಹ ಕಂಪನಿಗಳಿಗೆ ಲಾಭವಾಗುವಂತೆ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಿದ ಆರೋಪ ಹೊತ್ತಿರುವ ಡಿಎಂಕೆ ನಾಯಕ ಎ ರಾಜಾ ಅವರು ಕಳೆದ ನವೆಂಬರ್ ನಲ್ಲಿ ದೂರಸಂಪರ್ಕ ಸಚಿವರಾಗಿ ರಾಜೀನಾಮೆ ಸಲ್ಲಿಸಿದ್ದರು. ಈ ಹಗರಣದಿಂದಾಗಿ ಸರಕಾರದ ಬೊಕ್ಕಸಕ್ಕೆ 1.76 ಲಕ್ಷ ಕೋಟಿ ರು.ನಷ್ಟು ನಷ್ಟ ಸಂಭಿವಿಸಿತ್ತು.
ದೂರಸಂಪರ್ಕ ಇಲಾಖೆಯಿಂದ ಸಲ್ಲಿಸಲಾಗಿರುವ ದಾಖಲೆಗಳನ್ನು ಪರಿಶೀಲಿಸಿ, ತರಂಗಗುಚ್ಛ ಹಂಚಿಕೆಯ ಪ್ರಕ್ರಿಯೆಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಿ ವರದಿ ಒಪ್ಪಿಸುವುದು ಮಾತ್ರ ನ್ಯಾಯಮೂರ್ತಿಗಳ ಅಧಿಕಾರ ಪರಿಮಿತಿಯಲ್ಲಿದೆ. ಈ ಹಗರಣಕ್ಕೆ ಸಂಬಂಧಿಸಿದಂತೆ ಯಾವುದೇ ತನಿಖೆಯನ್ನು ತಾವು ನಡೆಸುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಈ ಬೃಹತ್ ಭ್ರಷ್ಟಾಚಾರ ಸಂಕೋಲೆಯಲ್ಲಿ ಮತ್ತೆ ಯಾರ್ಯಾರು ಭಾಗಿಯಾಗಿದ್ದಾರೆಂಬುದರ ತನಿಖೆ ಸಿಬಿಐ ನಡೆಸುತ್ತಿದೆ. [2ಜಿ ಹಗರಣ]












Click it and Unblock the Notifications