ಕರಾಚಿಯಲ್ಲಿ ರಿಯಾಜ್ ಭಟ್ಕಳ್ ಹತ್ಯೆ?

ಈ ಬಗ್ಗೆ ಮತ್ತಷ್ಟು ವಿವರ ನೀಡಿರುವ ಚೋಟಾ ರಾಜನ್, ರಿಯಾಜ್ ನಗರದ ಜಿಯಾಉದ್ದೀನ್ ಆಸ್ಪತ್ರೆಯ ವಾರ್ಡ್ ನಂಬರ್ 222 , 18ನೇ ನಂಬರಿನ ಹಾಸಿಗೆಯಲ್ಲಿ ರಿಯಾಜ್ ನನ್ನು ಹತ್ಯೆ ಮಾಡಲಾಗಿದೆ. ಅಬ್ದುಲ್ ಅಜೀಜ್ ಬಿದಾನಿ ಎನ್ನುವ ಇನ್ನೊಬ್ಬ ಪಾತಕಿ ರಿಯಾಜ್ ಶವವನ್ನು ಗುರುತಿಸಿದ್ದಾನೆಂದು ಹೇಳಿಕೆ ನೀಡಿದ್ದಾನೆ. ಮುಂಬೈ ಗುಪ್ತಚರ ಇಲಾಖೆ, ಎಟಿಎಸ್, ಕರ್ನಾಟಕ ಪೋಲೀಸ್ ಮತ್ತು ಭಟ್ಕಳ್ ಸಂಬಂಧಿಕರು ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿಲ್ಲ ಎಂದು ತಿಳಿಸಿದ್ದಾರೆ.
ಇಂಡಿಯನ್ ಮುಜಾಹಿದೀನ್ ಸಹ ಸಂಸ್ಥಾಪಕ, ಜೈಪುರ, ಬೆಂಗಳೂರು, ಪುಣೆ ಜರ್ಮನ್ ಬೇಕರಿ, ಅಹಮದಾಬಾದ್ ಮತ್ತು ದೆಹಲಿ ಬಾಂಬ್ ಸ್ಪೋಟದ ಪ್ರಮುಖ ರೂವಾರಿಯಾಗಿರುವ ರಿಯಾಜ್ ಭಟ್ಕಳ್, ಈ ದುಷ್ಕೃತ್ಯ ನಡೆಸಿದ ನಂತರ ಪಾಕ್ ಗೆ ಪರಾರಿಯಾಗಿದ್ದ ಎಂದು ಸಮಯ್ ಲೈವ್ ವರದಿ ಮಾಡಿದೆ.(ಭಯೋತ್ಪಾದನೆ)












Click it and Unblock the Notifications