Get Updates
Get notified of breaking news, exclusive insights, and must-see stories!

ರಾಮಮಂದಿರಕ್ಕೆ ನಿವೇಶನ ನೀಡದಿದ್ದರೆ ಹೋರಾಟ

Ashok Singhal
ಅಯೋಧ್ಯೆ, ಜ.2 : ಬಾಬ್ರಿ ಮಸೀದಿ ಮತ್ತು ರಾಮಜನ್ಮಭೂಮಿಯ 67 ಎಕರೆ ನಿವೇಶನವನ್ನು ರಾಮಮಂದಿರ ನಿರ್ಮಾಣಕ್ಕೆ ನೀಡದಿದ್ದರೆ ದೇಶಾದ್ಯಂತ ಮತ್ತೊಂದು ಬೃಹತ್ ಚಳವಳಿ ಆರಂಭಿಸುವುದಾಗಿ ವಿಶ್ವ ಹಿಂದು ಪರಿಷತ್ ಅಂತಾರಾಷ್ಟ್ರೀಯ ಅಧ್ಯಕ್ಷ ಅಶೋಕ್ ಸಿಂಘಾಲ್ ಎಚ್ಚರಿಕೆ ನೀಡಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಂದಿರ ನಿರ್ಮಾಣಕ್ಕೆ ತಿಂಗಳೊಳಗೆ ಶಿಲಾನ್ಯಾಸವನ್ನು ನೆರವೇರಿಸುತ್ತೇವೆ. ರಾಮಜನ್ಮಭೂಮಿಯಲ್ಲಿ ಭವ್ಯ ಮಂದಿರವನ್ನು ನಿರ್ಮಿಸಲು ನಮಗೆ ನಿವೇಶನ ಬೇಕು ಎಂದು ಸಿಂಘಾಲ್ ಸ್ಪಷ್ಟಪಡಿಸಿದ್ದಾರೆ. ಸುಪ್ರೀಂಕೋರ್ಟ್ ತೀರ್ಪಿಗೆ ಕಾಯುತ್ತಿದ್ದೇವೆ. ಪ್ರಸಕ್ತ ಮಂದಿರ ನಿರ್ಮಾಣಕ್ಕಾಗಿ ಯಾವುದೇ ಚಳವಳಿ ಇಲ್ಲ. ಒಂದು ವೇಳೆ ನಿವೇಶನ ನೀಡಿದಿದ್ದಲ್ಲ ತೀವ್ರ ಸ್ವರೂಪದ ಹೋರಾಟ ನಡೆಸುವುದಾಗಿ ಅವರು ಹೇಳಿದ್ದಾರೆ.

ಶಿಲ್ಪಿಗಳ ಅಂದಾಜಿನಂತೆ ಮಂದಿರ ನಿರ್ಮಾಣ ಆರಂಭಿಸಿದರೆ ಒಂದೂವರೆ ವರ್ಷದಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಮಂದಿರ ನಿರ್ಮಾಣ ಪೂರ್ತಿಗೊಳಿಸಲು ದೀರ್ಘ ಸಮಯ ಬೇಕಾಗುತ್ತದೆ ಎಂದ ಅವರು, ಮಂದಿರ ನಿರ್ಮಾಣಕ್ಕೆ ರಾಮಭಕ್ತರು ದೇಣಿಗೆಯನ್ನು ನೀಡಬೇಕು ಎಂದು ಮನವಿ ಮಾಡಿಕೊಂಡರು.(ಅಶೋಕ್ ಸಿಂಘಾಲ್)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+