Get Updates
Get notified of breaking news, exclusive insights, and must-see stories!

ಯಡಿಯೂರಪ್ಪ ಡಕಾಯಿತ : ಬೆಂಕಿ ಮಹದೇವು

BS Yeddyurappa
ಮೈಸೂರು, ಡಿ. 21 : ವೀರಶೈವರ ಭಿಕ್ಷೆಯಿಂದ ಬದುಕುತ್ತಿರುವ ಯಡಿಯೂರಪ್ಪ ನರಹಂತಕ ವೀರಪ್ಪನ್ ನಂತಾಗಿದ್ದಾರೆ. ವೀರಪ್ಪನ್ ರಹದಾರಿ ರಹಿತವಾಗಿ ದರೋಡೆ ನಡೆಸುತ್ತಿದ್ದರೆ, ಯಡಿಯೂರಪ್ಪ ರಹದಾರಿ ಸಹಿತವಾಗಿ ಆ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಬೆಂಕಿ ಮಹದೇವ್ ತೀವ್ರ ವಾಗ್ದಾಳಿ ನಡೆಸಿದರು.

ಯಡಿಯೂರಪ್ಪ ಅವರ ಕಾರ್ಯ ವೈಖರಿಯಿಂದ ಬೇಸತ್ತು ಬಿಜೆಪಿ ತೊರೆದಿದ್ದ ಎಂ ಮಹದೇವ್ ಜಾತ್ಯತೀತ ಜನತಾದಳ ಅಧಿಕೃತ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಜೆಡಿಎಸ್ ಬಾವುಟ ನೀಡುವ ಮೂಲಕ ಮಹದೇವ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.

ನಂತರ ಮಾತನಾಡಿದ ಮಹದೇವ್ ಭಾಷಣದುದ್ದಕ್ಕೂ ಯಡಿಯೂರಪ್ಪ ಅವರ ವಿರುದ್ದ ಟೀಕಾ ಪ್ರಹಾರಗಳನ್ನೆ ನಡೆಸಿದರು. ಜಾತಿಯ ಹೆಸರಿನಲ್ಲಿ ವೀರಶೈವರ ಬೆಂಬಲ ಪಡೆದು ಅಧಿಕಾರಕ್ಕೆ ಬಂದ ಯಡಿಯೂರಪ್ಪ ಬಸವಣ್ಣನವರ ತತ್ವ ಮತ್ತು ಆದರ್ಶಗಳನ್ನು ಗಾಳಿಗೆ ತೂರಿದ್ದು, ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದಲ್ಲಿ ನಿರತರಾಗಿದ್ದಾರೆ. ಆದ್ದರಿಂದ ವೀರಶೈವರು ಯಡಿಯೂರಪ್ಪಅವರನ್ನು ಬೆಂಬಲಿಸಬಾರದು ಎಂದು ಮಹದೇವ್ ಮನವಿ ಮಾಡಿಕೊಂಡರು.

ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಬಿಜೆಪಿ ಸರಕಾರದ ವಿರುದ್ಧ ಕುಮಾರಸ್ವಾಮಿ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲವಾಗಿ ನಿಲ್ಲಲು ಜೆಡಿಎಸ್ ಸೇರ್ಪಡೆಯಾಗುತ್ತಿರುವುದಾಗಿ ಸ್ಪಷ್ಟಪಡಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+