ಬಿಜೆಪಿ ಪ್ರಣಾಳಿಕೆ : ತಾಪಂ ಸದಸ್ಯರಿಗೆ ಗೌರವಧನ
ಬೆಂಗಳೂರು,
ಡಿ. 17 : ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತಿ ಚುನಾವಣೆಗಳಿಗೆ ಬಿಜೆಪಿ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಮುಖ್ಯವಾಗಿ ತಾಲ್ಲೂಕು ಪಂಚಾಯತಿ ಅಧ್ಯಕ್ಷರಿಗೆ 3,000, ಉಪಾಧ್ಯಕ್ಷರಿಗೆ 2,000 ಮತ್ತು ಸದಸ್ಯರಿಗೆ 1,000 ರುಪಾಯಿಗಳನ್ನು ನೀಡುವ ನೂತನ ಯೋಜನೆಯನ್ನು ಘೋಷಿಸಿದೆ. id="toptextpromo">28
ಪುಟಗಳ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಕೆ ಎಸ್ ಈಶ್ವರಪ್ಪ, ಗ್ರಾಮೀಣ ಪ್ರದೇಶದ ಜನರ ಜೀವನ ಗುಣಮಟ್ಟ ಸದೃಡಗೊಳಿಸಲು ಬಿಜೆಪಿ ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ.ಪಂಚಾಯತಿ ರಾಜ್ ನೀತಿಯನ್ನು ಇನ್ನಷ್ಟು ಭದ್ರಪಡಿಸುವುದು ಪ್ರಮುಖ ಆದ್ಯತೆ ಎಂದು ಈಶ್ವರಪ್ಪ ಹೇಳಿದರು. id='are-slot-1' class='oiad oi-axt oiadv'> id='top-searched-articles'>ಗ್ರಾಮೀಣ
ಭಾಗದ ರಸ್ತೆಗಳ ಸುಧಾರಣೆ, ಕುಡಿಯುವ ನೀರು, ಶೌಚಾಲಯ, ಆರೋಗ್ಯ, ನೈಸರ್ಗಿಕ ಸಂಪನ್ಮೂಲಗಳ ಕಾಯ್ಡುಕೊಂಡು ಹೋಗುವುದು ಮತ್ತು ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಹಿತ ರಕ್ಷಣೆಗೆ ಕ್ರಮಕೈಗೊಳ್ಳಲಾಗುವುದು. ಜೊತೆಗೆ ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಮೊದಲ ಬಾರಿಗೆ ತಾಲ್ಲೂಕು ಪಂಚಾಯತಿಗೂ ಹೆಚ್ಚಿನ ಅಧಿಕಾರಿ ನೀಡುವುದರ ಜೊತೆಗೆ ತಾಪಂ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸದಸ್ಯರಿಗೆ ಗೌರವ ಧನ ನೀಡುವ ಹೊಸ ಯೋಜನೆ ಘೋಷಣೆ ಮಾಡಲಾಗಿದೆ ಎಂದು ಈಶ್ವರಪ್ಪ ವಿವರಿಸಿದರು.











Click it and Unblock the Notifications