ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಆನಂದರಾವ್ ಸರ್ಕಲ್ ಬಳಿ ರು.20 ಲಕ್ಷ ಮಂಗಮಾಯ
ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದ ದೇವನಾಥ್ ಅವರ ಗೆಳೆಯ ಲೋಕೇಶ್ ಬಳಿ ಈ ಹಣವನ್ನು ತೆಗೆದುಕೊಂಡು ಬಂದಿದ್ದರು. ಹಣವನ್ನು ಪ್ಲಾಸ್ಟಿಕ್ ಚೀಲದಲ್ಲಿ ಇಟ್ಟು ಬಿಗಿಯಾಗಿ ಕಟ್ಟಿ ಕಾರಿನ ಡ್ರೈವರ್ ಸೀಟಿನಡಿ ಇಡಲಾಗಿತ್ತು. ಪೊಲೀಸ್ ಮೂಲಗಳು ಕೊಟ್ಟ ವಿವರಗಳು ಹೀಗಿವೆ.
ತಮ್ಮ ಸೋದರ ಮಂಜುನಾಥ್ ಗೌಡ ಹಾಗೂ ಗೆಳೆಯ ಕಿರಣ್ ಕುಮಾರ್ ಅವರನ್ನು ಕರೆತರುವ ಸಲುವಾಗಿ ದೇವನಾಥ್ ಹಡ್ಸನ್ ಸರ್ಕಲ್ ಬಳಿಗೆ ಹೋದರು. ಅಲ್ಲಿಂದ ಅವರು ಸೀದಾ ಆನಂದರಾವ್ ಸರ್ಕಲ್ಗೆ ಬಂದಿದ್ದಾರೆ. ಕೆಲಸದ ನಿಮಿತ್ತ ಮೂವರೂ ಲೋಕೋಪಯೋಗಿ ಇಲಾಖೆಯ ಒಳಹೊಕ್ಕಿದ್ದಾರೆ. ಬಳಿಕ ಹಿಂತಿರುಗಿ ಬಂದು ನೋಡುವಷ್ಟರಲ್ಲಿ ಕಾರಿನ ಗಾಜನನ್ನು ಹೊಡೆದ ಆಗಂತುಕರು ರು.20 ಲಕ್ಷಗಳನ್ನು ಮಂಗಮಾಯ ಮಾಡಿದ್ದರು.
Comments
English summary
Rs. 20 lakhs cash from a car stolen on the premises of Public Works Department office near Anand Rao Circle on Friday. The money belongs to Devanath Gowda, a resident of Betta Ulsoor.
Story first published: Saturday, November 27, 2010, 12:27 [IST]