Get Updates
Get notified of breaking news, exclusive insights, and must-see stories!

ಬೌಬೌ ಶಾಸಕರಿಗೆ ಬಿಎಸ್ ವೈ ಬಿಸ್ಕತ್ತುಗಳು

BSY carrot to North Karnataka BJP MLAs
ಬೆಂಗಳೂರು, ನ. 27 : ರಾಜ್ಯದ ನಾನಾ ನಿಗಮ ಮತ್ತು ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಿಸಿ ಕರ್ನಾಟಕ ಸರಕಾರ ಆದೇಶ ಹೊರಡಿಸಿದೆ. ಒಟ್ಟು 25 ಸ್ಥಾನಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ಭಾಜಪ ಕಾರ್ಯಕರ್ತರನ್ನು ಜಾಗರೂಕತೆಯಿಂದ ಆರಿಸಿದ್ದಾರೆ. ಈ 25 ಮಂದಿಯಲ್ಲಿ ನಿಷ್ಠಾವಂತರು, ಅರ್ಧ ನಿಷ್ಠಾವಂತರು, ಅತೃಪ್ತರು, ಪುಢಾರಿಗಳು, ಶಾಸಕರು, ಅವರು, ಇವರು, ಎಲ್ಲರೂ ಇದ್ದಾರೆ.

ಪಕ್ಷದಲ್ಲಿ ಬಲವಾಗಿ ಬೇರುಬಿಟ್ಟಿರುವ ಬಂಡಾಯವನ್ನು ಸ್ವಲ್ಪ ಮಟ್ಟಿಗೆ ಕತ್ತರಿಸುವ ಪ್ರಯತ್ನ ಈ ಮೂಲಕ ಕಾಣಿಸಿಕೊಂಡಿದೆ. ಭಾರತೀಯ ಜನತಾ ಪಕ್ಷಕ್ಕಲ್ಲದಿದ್ದರೂ ಯಡಿಯೂರಪ್ಪನವರಿಗೆ ಅಗ್ನಿ ಪರೀಕ್ಷೆ ಒಡ್ಡಲಿರುವ ಜಿಲ್ಲಾ ಪರಿಷತ್ ಮತ್ತು ತಾಲೂಕು ಪರಿಷತ್ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡೇ ನಿಗಮ ಮಂಡಳಿಗಳಿಗೆ ನೇಮಕಾತಿ ಆಗಿರುವುದು ಸಹಜ.

ಅಧ್ಯಕ್ಷ ಗಾದಿ ದಕ್ಕಿಸಿಕೊಂಡಿರುವ ಶಾಸಕರ ಪೈಕಿ ಬಹುತೇಕ ವೀರಶೈವರೇ ಇರುವುದನ್ನು ಕಂಡು ನೀವು ಹುಬ್ಬೇರಿಸುವ ಪ್ರಮೇಯವಿಲ್ಲ. ಯಾಕೆಂದರೆ, ಈ ಶಾಸಕರು ವೀರಶೈವ ಮತಗಳೇ ಪ್ರಧಾನವಾಗಿ ನಿರ್ಣಾಯಕವಾಗುವ ಪ್ರದೇಶಗಳಿಂದ ಗೆದ್ದು ಬಂದವರು. ಎಲ್ಲರೂ ಕೂಡ ಬಿಜೆಪಿಗೆ ಫಲವತ್ತಾದ ನೆಲ ಎನಿಸಿರುವ ಉತ್ತರ ಕರ್ನಾಟಕ ಭಾಗದಿಂದ ವಿಧಾನಸೌಧಕ್ಕೆ ಬಂದವರು. ಶಾಸಕರು ಮತ್ತು ಅವರು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರ ಇಂತಿದೆ.

* ಬಸವರಾಜ್ ನಾಯಕ್, ಮಾಯಕೊಂಡ (ಬಂಜಾರ ಅಭಿವೃದ್ಧಿ ನಿಗಮ)
* ಸಿದ್ದು ಸವದಿ, ತೇರದಾಳ (ವಿದ್ಯುತ್ ಚಾಲಿತ ಮಗ್ಗ ಅಭಿವೃದ್ದಿ ನಿಗಮ)
* ಜಗದೀಶ್ ಮೆಟ್ಗುಡ್ಡ, ಬೈಲಹೊಂಗಲ (ಮೈಸೂರು ಮಿನರಲ್ಸ್ ಲಿಮಿಟೆಡ್)
* ಕಲಕಪ್ಪ ಬಂಡಿ, ರೋಣ (ಕರಾರಸಾಸಂ)
* ಎಸ್ ಐ ಚಿಕ್ಕನಗೌಡರ್, ಕುಂದಗೋಳ (ಗ್ರಾಮೀಣ ಮೂಲಸೌಕರ್ಯ ಅಭಿವೃದ್ದಿ ನಿಗಮ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+