ಬೌಬೌ ಶಾಸಕರಿಗೆ ಬಿಎಸ್ ವೈ ಬಿಸ್ಕತ್ತುಗಳು
ಪಕ್ಷದಲ್ಲಿ ಬಲವಾಗಿ ಬೇರುಬಿಟ್ಟಿರುವ ಬಂಡಾಯವನ್ನು ಸ್ವಲ್ಪ ಮಟ್ಟಿಗೆ ಕತ್ತರಿಸುವ ಪ್ರಯತ್ನ ಈ ಮೂಲಕ ಕಾಣಿಸಿಕೊಂಡಿದೆ. ಭಾರತೀಯ ಜನತಾ ಪಕ್ಷಕ್ಕಲ್ಲದಿದ್ದರೂ ಯಡಿಯೂರಪ್ಪನವರಿಗೆ ಅಗ್ನಿ ಪರೀಕ್ಷೆ ಒಡ್ಡಲಿರುವ ಜಿಲ್ಲಾ ಪರಿಷತ್ ಮತ್ತು ತಾಲೂಕು ಪರಿಷತ್ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡೇ ನಿಗಮ ಮಂಡಳಿಗಳಿಗೆ ನೇಮಕಾತಿ ಆಗಿರುವುದು ಸಹಜ.
ಅಧ್ಯಕ್ಷ ಗಾದಿ ದಕ್ಕಿಸಿಕೊಂಡಿರುವ ಶಾಸಕರ ಪೈಕಿ ಬಹುತೇಕ ವೀರಶೈವರೇ ಇರುವುದನ್ನು ಕಂಡು ನೀವು ಹುಬ್ಬೇರಿಸುವ ಪ್ರಮೇಯವಿಲ್ಲ. ಯಾಕೆಂದರೆ, ಈ ಶಾಸಕರು ವೀರಶೈವ ಮತಗಳೇ ಪ್ರಧಾನವಾಗಿ ನಿರ್ಣಾಯಕವಾಗುವ ಪ್ರದೇಶಗಳಿಂದ ಗೆದ್ದು ಬಂದವರು. ಎಲ್ಲರೂ ಕೂಡ ಬಿಜೆಪಿಗೆ ಫಲವತ್ತಾದ ನೆಲ ಎನಿಸಿರುವ ಉತ್ತರ ಕರ್ನಾಟಕ ಭಾಗದಿಂದ ವಿಧಾನಸೌಧಕ್ಕೆ ಬಂದವರು. ಶಾಸಕರು ಮತ್ತು ಅವರು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರ ಇಂತಿದೆ.
*
ಬಸವರಾಜ್
ನಾಯಕ್,
ಮಾಯಕೊಂಡ
(ಬಂಜಾರ
ಅಭಿವೃದ್ಧಿ
ನಿಗಮ)
*
ಸಿದ್ದು
ಸವದಿ,
ತೇರದಾಳ
(ವಿದ್ಯುತ್
ಚಾಲಿತ
ಮಗ್ಗ
ಅಭಿವೃದ್ದಿ
ನಿಗಮ)
*
ಜಗದೀಶ್
ಮೆಟ್ಗುಡ್ಡ,
ಬೈಲಹೊಂಗಲ
(ಮೈಸೂರು
ಮಿನರಲ್ಸ್
ಲಿಮಿಟೆಡ್)
*
ಕಲಕಪ್ಪ
ಬಂಡಿ,
ರೋಣ
(ಕರಾರಸಾಸಂ)
*
ಎಸ್
ಐ
ಚಿಕ್ಕನಗೌಡರ್,
ಕುಂದಗೋಳ
(ಗ್ರಾಮೀಣ
ಮೂಲಸೌಕರ್ಯ
ಅಭಿವೃದ್ದಿ
ನಿಗಮ)