Get Updates
Get notified of breaking news, exclusive insights, and must-see stories!

ಭೂಹಗರಣ ತನಿಖೆಗೆ ವಹಿಸಲು ಸಿದ್ಧ : ಯಡಿಯೂರಪ್ಪ

Yeddyurappa
ಬೆಂಗಳೂರು, ನ. 16 : ಕುಟುಂಬ ವಿರುದ್ಧ ಬಂದಿರುವ ಭೂಹಗರಣದಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಹೇಳಿರುವ ಮುಖ್ಯಮಂತ್ರಿ ಯಡಿಯೂರಪ್ಪ, ತಮ್ಮ ಅವಧಿ ಸೇರಿ ಹಿಂದಿನ ಹತ್ತು ವರ್ಷಗಳಲ್ಲಿ ಭೂಮಿ ಹಂಚಿಕೆಯಲ್ಲಿ ನಡೆದಿರುವ ಅಕ್ರಮಗಳ ಕುರಿತು ನ್ಯಾಯಾಂಗ ತನಿಖೆ ನಡೆಸಲಾಗುವುದು ಎಂದು ಪ್ರಕಟಿಸಿದರು.

ಮುಖ್ಯಮಂತ್ರಿ ಮಕ್ಕಳು ಕೈಗಾರಿಕೋದ್ಯಮಿಗಳು ಆಗಬಾರದೆ ಎಂದು ಪ್ರಶ್ನಿಸಿರುವ ಅವರು, ಕಾನೂನು ಚೌಕಟ್ಟಿನೊಳಗೆ ಕೈಗಾರಿಕೆ ಹಾಗೂ ಆಸ್ಪತ್ರೆ ಸ್ಥಾಪನೆಗಾಗಿ ಕೆಐಎಡಿಬಿಯು ತಮ್ಮ ಮಕ್ಕಳಿಗೆ ಭೂಮಿ ಮಂಜೂರು ಮಾಡಿದೆ. ಇದರಲ್ಲಿ ಯಾವುದೇ ಅಕ್ರಮ ನಡೆಸಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಸೋಮವಾರ ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಮತ್ತು ಜೆಡಿಎಸ್ ಅಧಿಕಾರಾವಧಿಯಲ್ಲೂ ಹಲವು ಪ್ರಭಾವಿ ರಾಜಕಾರಣಿಗಳು ಕೆಐಎಡಿಬಿಯಿಂದ ಭೂಮಿ ಮಂಜೂರು ಮಾಡಿಸಿಕೊಂಡಿದ್ದಾರೆ. ಅದೇ ಮಾದರಿಯಲ್ಲೇ ತಮ್ಮ ಮಕ್ಕಳೂ ಕೈಗಾರಿಕೆಗಾಗಿ ಭೂಮಿ ಪಡೆದಿದ್ದಾರೆ ಎಂದು ಅವರು ಹೇಳಿದರು. ಫ್ಲೂಯಿಡ್ ಪವರ್ ಟೆಕ್ನಾಲಜೀಸ್ ಕಂಪನಿಯ ಏಳು ಮಂದಿ ಪಾಲುದಾರರಲ್ಲಿ ನನ್ನ ಪುತ್ರ ರಾಘವೇಂದ್ರ ಇದ್ದಾನೆ. ಕಂಪನಿ ಕೋರಿಕೆ ಮೇರೆಗೆ ಜಿಗಣಿ ಕೈಗಾರಿಕೆ ಪ್ರದೇಶದಲ್ಲಿ ಎರಡು ಎಕರೆ ಭೂಮಿ ಮಂಜೂರು ಮಾಡಿಕೊಡಲಾಗಿದೆ.

ಇನ್ನು ಪುತ್ರಿ ಉಮಾದೇವಿ, ನಾನು ಡಿಸಿಎಂ ಆಗುವ ಮುನ್ನವೇ ಬಿಪಿಒ ಕಂಪನಿ ಆರಂಭಿಸಿದ್ದಳು. ಎಂಕಾಂ ಪದವೀಧರೆಯಾಗಿರುವ ಆಕೆ ಬಿಪಿಎಲ್ ಕಂಪನಿ ಯಲ್ಲಿ 12 ವರ್ಷ ಕೆಲಸ ಮಾಡಿದ ಅನುಭವದ ಮೇಲೆ ಸ್ವಂತ ಬಿಸಿನೆಸ್ ಆರಂಭಿಸಿದ್ದಾಳೆ. ಕೆಐಎಡಿಬಿಗೆ ಅರ್ಜಿ ಹಾಕಿಕೊಂಡು, ಹಾರೋಹಳ್ಳಿ ಬಳಿ ಎರಡು ಎಕರೆ ಭೂಮಿ ಮಂಜೂರು ಮಾಡಿಸಿಕೊಂಡಿದ್ದಾಳೆ.

ಇನ್ನು ಶಿವಮೊಗ್ಗದಲ್ಲಿ ನಮ್ಮದೇ ಒಡೆತನದ ಜಮೀನಿನಲ್ಲಿ ಆಸ್ಪತ್ರೆ ಆರಂಭಿಸಿದ್ದೇವೆ. ಇದರ ಪಕ್ಕದಲ್ಲಿ ಇನ್ನೂ ಜಾಗದ ಅಗತ್ಯ ಇದ್ದಿದ್ದರಿಂದ 5.34 ಎಕರೆ ಭೂಮಿಯನ್ನು ಕೆಐಎಡಿಬಿಯಿಂದ ಮಂಜೂರು ಮಾಡಿಸಿಕೊಳ್ಳಲಾಗಿದೆ. ರೈತರಿಂದ ಬಲವಂತವಾಗಿ ಭೂಮಿ ಸ್ವಾಧೀನಪಡಿಸಿಕೊಂಡಿಲ್ಲ ಎಂದು ಸಮಜಾಯಿಷಿ ನೀಡಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+