ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುದರ್ಶನ್ ರಾಷ್ಟ್ರದ ಕ್ಷಮೆ ಕೇಳಲಿ : ಲಾಲು

By Mrutyunjaya Kalmat
|
Google Oneindia Kannada News

Lalu Prasad Yadav
ಪಾಟ್ನಾ, ನ. 14 : ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಆರೆಸ್ಸೆಸ್‌ನ ಮಾಜಿ ಮುಖ್ಯಸ್ಥ ಕೆಎಸ್ ಸುದರ್ಶನ್ ರಾಷ್ಟ್ರದ ಕ್ಷಮೆ ಕೇಳಬೇಕು ಎಂದು ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಒತ್ತಾಯಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸುದರ್ಶನ್ ಹೇಳಿಕೆ ಖಂಡನೀಯ. ಟೀಕಿಸುವುದಕ್ಕೆ ವಿರೋಧವಿಲ್ಲ. ಆದರೆ, ಇಂತಹ ಕೀಳು ಅಭಿರುಚಿಯ ಆರೋಪಗಳು ಸರಿಯಲ್ಲ. ಇದರಿಂದ ದೇಶದಲ್ಲಿ ಅಶಾಂತಿ ಉಂಟಾಗಲು ಕಾರಣವಾಗುತ್ತದೆ. ಹೀಗಾಗಿ ಸುದರ್ಶನ್ ಕೂಡಲೇ ದೇಶದ ಕ್ಷಮೆ ಕೇಳಬೇಕು ಎಂದು ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ.

ಶಿಸ್ತಿನ ಸಂಘಟನೆ ಎಂದೇ ಹೆಸರುವಾಸಿಯಾಗಿರುವ ಆರೆಸ್ಸೆಸ್ ನಲ್ಲಿ ಅಶಿಸ್ತು ಮನೆ ಮಾಡಿದೆ. ಈ ಹಿಂದೆ ಅಧ್ಯಕ್ಷರಾಗಿದ್ದ ಸಂಘಟದ ಅಧ್ಯಕ್ಷರೆ ವಿರೋಧಿ ಪಕ್ಷದ ನಾಯಕರಿಗೆ ಮನಸ್ಸಿಗೆ ಬಂದಂತೆ ಟೀಕೆ ಮಾಡುವುದು ಎಲ್ಲಿಯ ಶಿಸ್ತು. ಸುದರ್ಶನ ಹೇಳಿಕೆ ಸಮರ್ಥಿನಿಯವಲ್ಲ. ಇದರಿಂದ ಅವರು ಕೂಡಲೇ ದೇಶದ ಕ್ಷಮೆ ಯಾಚಿಸಬೇಕು ಎಂದು ಲಾಲು ಆಗ್ರಹಿಸಿದ್ದಾರೆ.

ಸೋನಿಯಾ ಗಾಂಧಿ ಅಮೆರಿಕದ ಏಜಂಟ್, ಮಾಜಿ ಪ್ರಧಾನಮಂತ್ರಿಗಳಾದ ಇಂದಿರಾ ಗಾಂಧಿ, ರಾಜೀವ ಗಾಂಧಿ ಅವರ ಹತ್ಯೆಗೆ ಸಂಚು ರೂಪಿಸಿದ್ದರು ಎಂದು ಸುದರ್ಶನ್ ಭೋಪಾಲ್ ನಲ್ಲಿ ಮಾಧ್ಯಮಗಳಿಗೆ ವಿವರಿಸಿದ್ದರು.

English summary
Rashtriya Janata Dal (RJD) chief and former Bihar Chief Minister Lalu Prasad Yadav condemned the insulting remarks made by former Rashtriya Swayamsewak Sangh (RSS) chief K. S. Sudarshan against Congress President Sonia Gandhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X