ಜೆಡಿಎಸ್ನವರು ಗೂಂಡಾಗಳು: ಶೋಭಾ ಕರಂದ್ಲಾಜೆ

ಜೆಡಿಎಸ್ ಅವರ ಹಸ್ತಕ್ಷೇಪದಿಂದ ರಾಜ್ಯ ರಾಜಕೀಯ ವಲಯದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದೆ. ನಿರಾಧಾರ ಸುದ್ದಿಗಳನ್ನು ಸೃಷ್ಟಿ ಮಾಡಿ ಜನತೆಯನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಶಂಕರಲಿಂಗೇಗೌಡರನ್ನು ಜೆಡಿಎಸ್ನವರು ಭೇಟಿ ಮಾಡುವ ಉದ್ದೇಶವಾದರೂ ಏನು ಎಂದು ಶೋಭಾ ಪ್ರಶ್ನಿಸಿದ್ದಾರೆ.
ರೇವಣ್ಣ ಮತ್ತು ದತ್ತ ಅವರು ಶಾಸಕರ ಭವನಕ್ಕೆ ಬಂದು ಶಂಕರಲಿಂಗೇಗೌಡರನ್ನು ಭೇಟಿ ಮಾಡಲು ಪ್ರಯತ್ನಿಸಿದ್ದು ಎಷ್ಟು ಸರಿ ಎಂದರು. ಗೋವಾದಲ್ಲಿ ಬಿಜೆಪಿ ಶಾಸಕರನ್ನು ಗೃಹಬಂಧನದಲ್ಲಿ ಇಡಲಾಗಿದೆ. ಹೋಟೆಲ್ ನ ಸುತ್ತ ಪೊಲೀಸ್ ಕಾವಲು ಹಾಕಲಾಗಿದೆ. ಶಾಸಕರನ್ನು ಭೇಟಿ ನೀಡಲು ಪ್ರಯತ್ನಿಸುತ್ತಿಲ್ಲ ಎಂದು ಆರೋಪಿಸಿದರು.












Click it and Unblock the Notifications