ರೆಡ್ಡಿ ಸಂಧಾನಕ್ಕೆ ತಲೆಬಾಗಿದ ಬಿಜೆಪಿ ಹಿರಿತಲೆಗಳು

ಭಿನ್ನಮತೀಯ ಜೊತೆ ಸೇರಿಕೊಂಡು ಬೆಂಬಲ ವಾಪಾಸ್ ಪತ್ರಕ್ಕೆಸಹಿ ಹಾಕಿದ್ದ ಬೆಳ್ಳುಬ್ಬಿ ಅವರ ಬೆನ್ನ ಹಿಂದೆ ಇನ್ನೂ ಅನೇಕ ಶಾಸಕರು ಇಂದು ಶ್ರೀರಾಮುಲು ನಿವಾಸಕ್ಕೆ ಆಗಮಿಸುವ ನಿರೀಕ್ಷೆಯಿದೆ. ಒಟ್ಟಿನಲ್ಲಿ ದೇವರ ಮೊರೆಹೊಕ್ಕ ಸಿಎಂಗೆ ಮತ್ತೊಮ್ಮೆ ರೆಡ್ಡಿ ಸೋದರರು ಸಂಧಾನಕಾರರಾಗಿ ಯಶಸ್ಸು ತರುವ ನಿರೀಕ್ಷೆಯಿದೆ.
'ಇತಿಹಾಸವನ್ನು ಅವಲೋಕಿಸಿದರೆ ಯುದ್ಧಕ್ಕೂ ಮೊದಲು, ಯುದ್ಧದ ಆರಂಭದಲ್ಲಿ, ಯುದ್ಧದ ಸಂದರ್ಭದಲ್ಲಿ ಹಾಗೂ ಯುದ್ಧದ ನಂತರ ಕೂಡ ಸಂಧಾನ ನಡೆಯುವುದನ್ನು ಕಾಣಬಹುದು. ಇದು ಆಂತರಿಕ ಸಂಧಾನವಾದ್ದರಿಂದ ಹೆಚ್ಚು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ' ಎಂದು ರಾಮ ಭಕ್ತ ಶಾಸಕ ಸಿಟಿ ರವಿ ಅವರು ಮುಂಜಾನೆ ಹೇಳಿದ್ದನ್ನು ಕಾರ್ಯಗತ ಮಾಡುವತ್ತ ರೆಡ್ಡಿ ಸೋದರರು ನಿರತರಾಗಿದ್ದಾರೆ.
'ಸೆ.11ನೇ ತಾರೀಖು 11 ಗಂಟೆಗೆ 6 ಕೋಟಿ ಕನ್ನಡಿಗರ ಎದುರು ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರು ತಲೆ ತಗ್ಗಿಸಲಿದ್ದಾರೆ. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಇಂಥ ಕೀಳುಮಟ್ಟಕ್ಕೆ ಇಳಿದಿರುವುದು ದುರದೃಷ್ಟ. ಕರ್ನಾಟಕದ ಅಭಿವೃದ್ಧಿಗಾಗಿ ಜನಾದೇಶ ಪಡೆದ ಬಿಜೆಪಿ ಸರ್ಕಾರ, ಜನತೆಗೆ ಮೋಸ ಮಾಡುವುದಿಲ್ಲ. ಇಂದು ಸಂಜೆ ಬಿಜೆಪಿಯ ಎಲ್ಲಾ ನಿಷ್ಠಾವಂತ ಶಾಸಕರು ನಮ್ಮ ಬಳಿಗೆ ಬರಲಿದ್ದಾರೆ ನಂತರ ರಾಜ್ಯಪಾಲರ ನಿವಾಸಕ್ಕೆ ತೆರಳಿ ಬೆಂಬಲ ಹಿಂಪೆಡದ ಪತ್ರವನ್ನು ಪುರಸ್ಕರಿಸದಂತೆ ಮನವಿ ಸಲ್ಲಿಸಲಾಗುವುದು' ಎಂದು ಜನಾರ್ದನ ರೆಡ್ಡಿ ಹೇಳಿದರು.
ಇತ್ತ ಜನಾರ್ಧನ ರೆಡ್ಡಿ ಸಂಧಾನ ಸಫಲವಾಗುತ್ತಿದ್ದಂತೆ ಪ್ರತಿಪಕ್ಷಗಳ ಮುಖಂಡರ ಮುಖದಲ್ಲಿ ಮೂಡಿದ್ದ ಮಂದಹಾಸ ಮಾಯವಾಗಿದೆ. ತುರ್ತು ಶಾಸಕಾಂಗ ಸಭೆಯನ್ನು ಕರೆದಿರುವ ಸಿದ್ದರಾಮಯ್ಯ ಅವರು, ಬೆಳಗ್ಗಿನಿಂದ ಟಿವಿಗೆ ಅಂಟಿಕೊಂಡು ರಾಜಕೀಯ ಬೆಳವಣಿಗೆಗಳ ಏರಿಳಿತವನ್ನು ನೋಡುತ್ತಿದ್ದಾರೆ. ನಾಳೆ ಬಿಜೆಪಿ ಸರ್ಕಾರದ ಇನ್ನೊಂದು ಹಗರಣ ಬಹಿರಂಗಪಡಿಸುವುದಾಗಿ ಹೇಳಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪ್ರತಿಕ್ರಿಯೆ ನೀಡಲು ಸದ್ಯ್ಯದಲ್ಲೇ ಸುದ್ದಿಗೋಷ್ಠಿ ಕರೆಯುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ












Click it and Unblock the Notifications